ಉಜಿರೆ ರತ್ನಮಾನಸದಲ್ಲಿ ಕ್ಷೌರ ತರಬೇತಿ

0

ಉಜಿರೆ: ರತ್ನ ಮಾನಸ ನಿಲಯದ ಜೀವನ ಶಿಕ್ಷಣ ತರಬೇತಿಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೌರ ತರಬೇತಿಯನ್ನು ಪ್ರಾರಂಭಿಸಲಾಯಿತು.ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ನಿಲಯದ ಹಿರಿಯ ವಿದ್ಯಾರ್ಥಿ ಭರತ್ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಬಂದ ವೇಣೂರಿನ ಪುಷ್ಪ ಸಲೂನ್ ನ ಸದಾಶಿವ ಭಂಡಾರಿ ಅವರು ಹಾಗೂ ನಿಲಯದ ಪಾಲಕರುಗಳಾದ ಯತೀಶ್ ಕೆ. ಬಳಂಜ, ರವಿಚಂದ್ರ ಬಿ, ತ್ರಿಭುವನ್ ಜೈನ್, ಉದಯ ರಾಜ್ ಉಪಸ್ಥಿತರಿದ್ದರು.

ಈ ಐದು ವಾರಗಳ ಕ್ಷೌರ ತರಬೇತಿಯಲ್ಲಿ 8 ನೇ ತರಗತಿಯ ಆಸಕ್ತ 30 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆಯುತ್ತಿದ್ದಾರೆ .

LEAVE A REPLY

Please enter your comment!
Please enter your name here