ಶಿರ್ಲಾಲು: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವು ಜೂ.15 ರಂದು ನಡೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳ್ತಂಗಡಿ ನೋಟರಿ ಪಬ್ಲಿಕ್ ವಕೀಲ ಮುರಳಿ.ಬಿ ರವರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮುರುಳಿ ಬಿ ರವರ ಪತ್ನಿ ಮನೋರಮಾ ಹಾಗೂ ಪುತ್ರರಾದ ಮಯೂರ ಹಾಗೂ ಮಂದಾರ ಉಪಸ್ಥಿತರಿದ್ದರು.ಪತ್ನಿ ಮನೋರಮಾ ಹಾಗೂ ಪುತ್ರರಾದ ಮಯೂರ ಹಾಗೂ ಮಂದಾರ ಎಲ್ಲ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು.
ಮುರಳಿ ಹಾಗೂ ಅವರ ಕುಟುಂಬಕ್ಕೆ ಶಿರ್ಲಾಲು ಶಾಲೆಯ ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸಮಿತಿಯವರು ಕೃತಜ್ಞತೆ ಸಲ್ಲಿಸಿದರು.