ಗುತ್ತಿನಬೈಲು ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

0

ಸವಣಾಲು: ಸ. ಹಿ.ಪ್ರಾ. ಶಾಲೆ. ಗುತ್ತಿನಬೈಲು ಇಲ್ಲಿ ಜೂ.13ರಂದು ವಿದ್ಯಾಭಿಮಾನಿಗಳು ಮತ್ತು ದಾನಿಗಳಾದ ನೋಟರಿ ವಕೀಲರಾದ ಮುರಳಿ.ಬಿ.ಇವರು ಒಂದರಿಂದ ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ನೋಟ್ ಪುಸ್ತಕಗಳ ಪ್ರಾಯೋಜಕತ್ವ ವಹಿಸಿ ಮಕ್ಕಳಿಗೆ ಬರೆಯುವ ಪುಸ್ತಕ ವಿತರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಭಾಕರ್ ಭಟ್. ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ದಾನಿಗಳಾದ ಮುರಳಿ.ಬಿ ನೋಟರಿ ವಕೀಲರು, ಇವರ ಧರ್ಮಪತ್ನಿಯಾದ ಶ್ರೀಮತಿ ಮನೋರಮ, ಮಕ್ಕಳಾದ ಮಯೂರ ಹಾಗೂ ಮಂದಾರ ಉಪಸ್ಥಿತರಿದ್ದರು.

ಪ್ರಭಾರ ಮುಖ್ಯಶಿಕ್ಷಕಿ ನಮಿತಾ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗೌರವ ಶಿಕ್ಷಕ ದಿನೇಶ್.ಕೆ ಸ್ವಾಗತಿಸಿ, ಸಹ ಶಿಕ್ಷಕಿ ಶ್ಯಾಮಲಾ. ಕೆ ಧನ್ಯವಾದವಿತ್ತರು.ಸಹ ಶಿಕ್ಷಕ ವಸಂತಗುಡಿಗಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here