ಬಳಂಜ: ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾಮ್ ಸ್ಕೊಪ್ ಇದರ ಸಿಎಸ್ಆರ್ ನಿಧಿಯಿಂದ ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ

0

ಬಳಂಜ.ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಕಾಮ್ ಸ್ಕೊಪ್ ಇದರ ಸಿ.ಎಸ್.ಆರ್ ನಿಧಿಯ ಪ್ರಾಯೋಜಕತ್ವದಲ್ಲಿ ಬಳಂಜ ಪ್ರೌಢ ಶಾಲೆಯ 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಬ್ಯಾಗ್ ವಿತರಣೆ ಜೂ.12 ರಂದು ಬಳಂಜ ಶಾಲೆಯಲ್ಲಿ ನಡೆಯಿತು.


ಒಟ್ಟು 61 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದು ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಉಸ್ಮಾನ್ ಬಳಂಜ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಭಾಗವಹಿಸಿದ್ದರು.ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಬಳಂಜ ಹಾಣಿಂಜ ಸುಕೇಶ್ ಪೂಜಾರಿ ಮತ್ತು ಕವಿತಾ ಸುಕೇಶ್ ಉಪಸ್ಥಿತರಿದ್ದರು.


ಸತ್ಯವತಿ ಎಂ.ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ವೀಣಾ ವಂದಿಸಿದರು.ಶಾಲಾ ಶಿಕ್ಷಕರಾದ ಗಣೇಶ್ ಮತ್ತು ಸುಕನ್ಯಾರವರು ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here