ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ವತಿಯಿಂದ 20 ನೇ ವರ್ಷದ ಉಚಿತ ಆರೋಗ್ಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ

0

ಅಳದಂಗಡಿ: ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ವತಿಯಿಂದ 20 ನೇ ವರ್ಷದ ಉಚಿತ ಆರೋಗ್ಯ ತಪಾಸಣೆ, ಬೃಹತ್ ರಕ್ತದಾನ ಶಿಬಿರವು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಜೂ.11 ರಂದು ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಸ್ಟ್ ಫೌಂಡೇಶನ್ ನ‌ ಅಧ್ಯಕ್ಷ ರಕ್ಷಿತ್ ಶಿವಾರಂ ದೀಪ ಪ್ರಜ್ವಲಿಸಿ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು ಈ ವೇದಿಕೆ ಎಲ್ಲರಿಗೂ ಮಾದರಿದಾಯಕವಾಗಿದೆ.ಡಾಕ್ಟರ್ ನ್ನು ತಯಾರು ಮಾಡುವ ಜಿಲ್ಲೆ ದಕ್ಷಿಣ ಕನ್ನಡ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸತ್ಯದೇವತಾ ದೈವಸ್ಥಾನ ಅಳದಂಗಡಿ ಆಡಳಿತದಾರರು ಶ್ರೀ ಶಿವಪ್ರಸಾದ್ ಅಜಿಲರು, ಹಾಗೂ ಕೆ ಎಂ ಸಿ ಅತ್ತವಾರ ಆಸ್ಪತ್ರೆಯ ಪ್ರೊಫೆಸರ್ ಡಾ| ಆತ್ಮಾನಂದ ಎಸ್ ಹೆಗ್ಡೆ, ನಾರವಿ ಅನಂತ್ ಕ್ಲಿನಿಕ್ ನಾ ಡಾ| ಶೀತಲ್ ಕುಮಾರ್,ಡಾ| ಸುಶ್ಮಾ ಎಸ್ ಡೊಂಗ್ರೆ, ನಾಟಿ ವೈದ್ಯ ಬೇಬಿ ಪೂಜಾರಿ ಪುಣ್ಕೆತ್ತಾರು , ಡಾ | ಸೌಪರ್ಣಿಕಾ ಪಿಲ್ಯ, ರೆಡ್ ಕ್ರಾಸ್ ಮಂಗಳೂರಿನ ಪ್ರವಿಣ್, ಡಾ | ದಿಶಾ ಪಿಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here