ಗುರುವಾಯನಕೆರೆ ರಸ್ತೆಯ ಪಕ್ಕದಲ್ಲಿ ತ್ಯಾಜ್ಯವನ್ನು ಹಾಕಿದವರಿಂದಲೇ ತೆರವು

0

ಗುರುವಾಯನಕೆರೆ: ಗುರುವಾಯನಕೆರೆಯಿಂದ – ಬೆಳ್ತಂಗಡಿ ಕಡೆಗೆ ಹೋಗುತ್ತಿರುವ ಆಂಧ್ರಪ್ರದೇಶದ ಮೂಲದ ಕಾರೊಂದರಲ್ಲಿ ‌ಬಂದಿದ್ದ ಪ್ರಯಾಣಿಕರು ತ್ಯಾಜ್ಯವನ್ನು ಜೈನ್ ಪೇಟೆ ಪಕ್ಕದ ರಸ್ತೆ ಬದಿಯಲ್ಲಿ ಎಸೆದು ಹೋಗುತಿರುವುದ್ದನ್ನು ಗಮನಿಸಿದ ಬಂದಾರು ಗ್ರಾಮ ಪಂಚಾಯತ್ ಪಿಡಿಒ ಮೋಹನ್ ಬಂಗೇರ ರವರು ವಾಹನವನ್ನು ಹಿಂಬಾಲಿಸಿ ಗುರುವಾಯನಕೆರೆಯ ಜೈನ್ ಪೇಟೆಗೆ ಕರೆತಂದು ಹಾಕಿರುವ ಕಸವನ್ನು ಅವರಿದಂಲೇ ತೆರವು ಮಾಡಿಸಿದರು.ಮುಂದಿನ ದಿನಗಳಲ್ಲಿ ಯಾರು ಈ ರೀತಿಯ ತಪ್ಪು ಕೆಲಸವನ್ನು ಮಾಡಬಾರದೆಂದು ಬುದ್ಧಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಸರಕಾರಿ ವಾಹನ ಚಾಲಕ ಕವನ್ ಕುಮಾರ್ ಪಣೆಜಾಲು ಉಪಸ್ಥಿತರಿದ್ದರು.ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here