ಎಸ್.ಎಸ್.ಎಫ್ ಕುಪ್ಪೆಟ್ಟಿ ಹಾಗೂ ಉರುವಾಲು ಸೆಕ್ಟರ್ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

0

ಕುಪ್ಪೆಟ್ಟಿ: ಕುಪ್ಪೆಟ್ಟಿ ಸೆಕ್ಟರ್ ಹಾಗೂ ಉರುವಾಲು ಸೆಕ್ಟರ್ ವತಿಯಿಂದ ವತಿಯಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಎಸ್.ಎಸ್.ಎಫ್ ದಕ್ಷಿಣ ಕನ್ನಡ ಬ್ಲಡ್ ಸೈಬೋ ಇದರ 295 ನೇ ಸಾರ್ವಜನಿಕ ರಕ್ತದಾನ ಶಿಬಿರ ವಾಹ ಅಕಾಡೆಮಿ ಕುಪ್ಪೆಟ್ಟಿಯಲ್ಲಿ ನಡೆಯಿತು.

ರಶೀದ್ ಸಅದಿ ಪದ್ಮುಂಜ ದುಃಅ ನೆರವೇರಿಸಿದರು. ಅಬೂಬಕ್ಕರ್ ಸಿದ್ದೀಕ್ ಬೋವು ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಹಮ್ಮದ್ ಅಲೀ ತುರ್ಕಳಿಕೆ ಉದ್ಘಾಟಿಸಿದರು. ನಝೀರ್ ಅಹ್ಸನಿ ಹಾಗೂ ಡಾ. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉರುವಾಲು ಸೆಕ್ಟರ್ ಅಧ್ಯಕ್ಷರಾದ ಸಂಶುದ್ದೀನ್ ಹಿಮಮಿ ಉರುವಾಲು ಪದವು, ಉಬೈದ್ ಬೋವು ಉಪಸ್ಥಿತರಿದ್ದರು. ಫಾರೂಕ್ ಸಅದಿ ಕುಪ್ಪೆಟ್ಟಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here