ಬ್ರಹ್ಮೋಪದೇಶದಲ್ಲಿ ಶರಸೇತು ಬಂಧನ ತಾಳಮದ್ದಳೆ

0

ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಪ್ರಕಾಶ್ ಆಚಾರ್ಯ ಮತ್ತು ಲಕ್ಷ್ಮಿ ದಂಪತಿಯರ ಪುತ್ರ ಚಿ.ಆಕಾಶ ನ ಬ್ರಹ್ಮೋಪದೇಶದ ಪ್ರಯುಕ್ತ ಯಕ್ಷ ಭಾರತಿ ಕನ್ಯಾಡಿ ಸಂಯೋಜನೆಯಲ್ಲಿ ಶರಸೇತು ಬಂಧನ ತಾಳ ಮದ್ದಳೆ ಜರಗಿತು.

ಭಾಗವತರಾಗಿ ಮಹೇಶ ಕನ್ಯಾಡಿ, ಕುಮಾರಿ ಸಿಂಚನ ಮೂಡುಕೋಡಿ ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವಾಸುದೇವ ಆಚಾರ್ಯ ಉಜಿರೆ, ಅರ್ಥದಾರಿಗಳಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಸತೀಶ ಶಿರ್ಲಾಲು ಭಾಗವಹಿಸಿದ್ದರು.

ಕಲಾವಿದ ವಾಸುದೇವ ಆಚಾರ್ಯ ಉಜಿರೆ ತಾಳಮದ್ದಳೆಯ ಕಲಾವಿದರನ್ನು ಗೌರವಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here