ಸಿಯೋನ್ ಆಶ್ರಮದ ನೂತನ ಕಟ್ಟಡದ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ಅನುದಾನ

0

ಗಂಡಿಬಾಗಿಲು: ಸರ್ವ ಕ್ಷೇತ್ರಗಳಲ್ಲೂ ಅಭೂತಪೂರ್ವ ಸೇವೆ ಸಲ್ಲಿಸುತ್ತಾ ಬಡವರ ನಿತ್ಯಾಶ್ರಯ ಕಣ್ಮಣಿಯಾಗಿರುವ ಹಾಗೂ ಸಿಯೋನ್‌ ಆಶ್ರಮದ ಸರ್ವರೀತಿಯ ಅಭಿವೃದ್ಧಿಗೆ ಬೆನ್ನೆಲುಬಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಹಳ ವರ್ಷಗಳಿಂದಲೂ ಎಲ್ಲಾ ರೀತಿಯ ಸಹಾಯ-ಸಹಕಾರಗಳನ್ನು ನೀಡುತ್ತಾ ಬಂದಿರುತ್ತಾರೆ.ಅದೇ ರೀತಿ ಸಿಯೋನ್ ಆಶ್ರಮದ ಮನವಿ ಪತ್ರದಂತೆ ಶ್ರೀ ಸ್ವಾಮಿಯ ಪ್ರಸಾದ ರೂಪವಾಗಿ ರೂ.10 ಲಕ್ಷದ ಚೆಕ್ಕನ್ನು ಶ್ರೀ ವಸಂತ್ ಸಾಲಿಯಾನ್ (ಉಡುಪಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರು) ಹಾಗೂ ಶ್ರೀಯುತ ಸುರೇಂದ್ರ ಯೋಜನಾಧಿಕಾರಿ,ಬೆಳ್ತಂಗಡಿ ) ಮತ್ತು ತಿಮ್ಮಯ್ಯ ನಾಯ್ ( ಉಡುಪಿ ಪ್ರಾದೇಶಿಕ ಕಛೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ) ಮತ್ತು ಶ್ರೀಯುತ ರಾಜೇಶ್ (ಮೇಲ್ವಿಚಾರಕರು) ಇವರು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಯು.ಸಿ.ಪೌಲೋಸ್‌ರವರಿಗೆ ಹಸ್ತಾಂತರಿಸಿದರು.

ಪೂಜ್ಯ ಖಾವಂದರ ಅಮೂಲ್ಯವಾದ ನೆರವಿನಿಂದ ಆಶ್ರಮದ ನಿವಾಸಿಗಳಿಗೆ ಕೊಠಡಿ ನಿರ್ಮಿಸಲು ಅನುಕೂಲವಾಗಿರುತ್ತದೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಈ ಅಮೂಲ್ಯವಾದ ದೇಣಿಗೆಗೆ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಯು.ಸಿ.ಪೌಲೋಸ್, ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಎಲ್ಲಾ ಆಶ್ರಮನಿವಾಸಿಗಳು ಚಿರರುಣಿಗಳಾಗಿರುತ್ತಾರೆ.

LEAVE A REPLY

Please enter your comment!
Please enter your name here