ನೆರಿಯ: ಬಯಲು ಜೈ ಶ್ರೀರಾಮ್ ಫ್ರೆಂಡ್ಸ್ ತಂಡದಿಂದ ನೆರವು

0

ನೆರಿಯ: ಕಳೆದ ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೆರಿಯ ಗ್ರಾಮದ ಗಂಪದಕೋಡಿ ನಿವಾಸಿ ನಿತಿನ್ ಇವರ ಚಿಕಿತ್ಸೆಗೆ ನೆರವು ನೀಡುವ ನಿಟ್ಟಿನಲ್ಲಿ ಈ ಬಾರಿಯ NKL-2023 ರಲ್ಲಿ ನಮ್ಮ ಜೈ ಶ್ರೀರಾಮ್ ಫ್ರೆಂಡ್ಸ್ ಬಯಲು ತಂಡಕ್ಕೆ ಲಭಿಸಿದ ದ್ವಿತೀಯ ಬಹುಮಾನದ ಮೊತ್ತ ರೂ.5000/- ಮತ್ತು ಜೈ ಶ್ರೀರಾಮ್ ಫ್ರೆಂಡ್ಸ್ ಬಯಲು, ನೆರಿಯ ಇದರ ಸದಸ್ಯರಿಂದ ಸಂಗ್ರಹಿಸಿದ ರೂ.15,100/- ಒಟ್ಟು ಸೇರಿಸಿ ರೂ.20,100/- ಅನ್ನು ಮೇ.26ರಂದು ನಿತಿನ್ ನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಮಾಲಕರಾದ ರೂಪೇಶ್ ನೀರಳಿಕೆ ಮತ್ತು ಅರುಣ್ ಅಪ್ಪಿಲ ಮತ್ತು ತಂಡದ ಕಪ್ತಾನ ಲೋಕೇಶ್ ಕಡ್ಡಿಬಾಗಿಲು ಹಾಗೂ ಜೈ ಶ್ರೀರಾಮ್ ಫ್ರೆಂಡ್ಸ್ ಬಯಲು ನ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here