ಹರೀಶ್ ಪೂಂಜ ಗೆಲುವು: ಕುತ್ಯಾರಿನಿಂದ ಕಾರಿಂಜಕ್ಕೆ ಗೆಲುವಿನ ಸಂಕಲ್ಪ ಯಾತ್ರೆ

0

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಗೆಲುವಿಗೋಸ್ಕರ ಏ.17 ರಂದು ನಾಮಪತ್ರ ಸಲ್ಲಿಕೆ ದಿನ ಮಾಡಿಕೊಂಡ ಸಂಕಲ್ಪದಂತೆ ಮೇ.20 ರಂದು ಕುತ್ಯಾರಿನಿಂದ ಕಾರಿಂಜಕ್ಕೆ ಪಾದಯಾತ್ರೆ ನಡೆಸಿದರು.

ಕಾರಿಂಜೇಶ್ವರ ಮತ್ತು ಪಾರ್ವತಿ ಸನ್ನಿಧಾನದಲ್ಲಿ ಕುಂಕುಮಾರ್ಚನೆ, ರುದ್ರಾಭಿಷೇಕ ಸೇವೆಯನ್ನು ಮಾಡಿಸಿ ಲೋಕದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾ ಜ ಪ ಕ್ಕೆ ಭರ್ಜರಿ ಜಯ ಲಭಿಸಲಿ, ಮೋದಿಜಿಯವರಿಗೆ ಅಭೂತ ಪೂರ್ವ ಗೆಲುವು ಸಿಗಲಿ ಎಂದು ಪ್ರಾರ್ಥಿಸಿ, ನಂತರ ಪ್ರಸಾದವನ್ನು ಶಾಸಕರ ಕಚೇರಿಗೆ ಕೊಟ್ಟರು.

ಪಾದಯಾತ್ರೆಯಲ್ಲಿ ಮುಂಡಾಜೆಯ ಪಂಚಾಯತ್ ಸದಸ್ಯರುಗಳಾದ ಗಣೇಶ್ ಬಂಗೇರ, ಜಗದೀಶ್ ನಾಯ್ಕ ಹಾಗೂ ಕೃಷಿಕ ಸಚಿನ್ ಜಿ.ಭಿಡೆ.ಭಾಗವಹಿಸಿದ್ದರು

LEAVE A REPLY

Please enter your comment!
Please enter your name here