ನಾರಾವಿಯಲ್ಲಿ ಬಿಜೆಪಿ ವಿಜಯೋತ್ಸವ

0

ನಾರಾವಿ : ಕರ್ನಾಟಕ ವಿಧಾನ ಸಭಾ ಚುನಾವಣೆಯು ಮೇ 10ರಂದು ನಡೆದಿದ್ದು. ಇದರ ಫಲಿತಾಂಶ ಮೇ.13ರಂದು ನಡೆದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಶಾಸಕ ಹರೀಶ್ ಪೂಂಜರನ್ನು ನಾರಾವಿ ಪೇಟೆಯಲ್ಲಿ ವಿಜಯೋತ್ಸವ ಮೂಲಕ ಅಭಿನಂದಿಸಲಾಯಿತು.

ವಿಜಯೋತ್ಸವದಲ್ಲಿ ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ್ ಹೆಗ್ಡೆ,ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಭಂಡಾರಿ,ನಿರ್ದೇಶಕರಾದ ರಾಜೇಂದ್ರ ಕುಮಾರ್ ಪಟ್ಣಶೆಟ್ಟಿ ಮನೆ ನಾರಾವಿ, ಪ್ರಮುಖ ಮುಖಂಡರುಗಳಾದ ಶ್ರೀನಿವಾಸ ಕಿಣಿ, ವಿನಯ್ ಹೆಗ್ಡೆ, ಜಗತ್ಪಾಲ ಜೈನ್, ಪ್ರಸಾದ್ ಪೂಜಾರಿ ಹೊಸೊಕ್ಲು, ಬೆಳ್ತಂಗಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಬಿಜೆಪಿ ಶಕ್ತಿ ಕೇಂದ್ರ ನಾರಾವಿ ಇದರ ಅಧ್ಯಕ್ಷರಾದ ವಸಂತ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜವರ್ಮ ಜೈನ್, ನಾರಾಯಣ ಪೂಜಾರಿ, ಶ್ರೀಮತಿ ಸುಮಿತ್ರಾ, ಶ್ರೀಮತಿ ಸರಿತಾ, ಮತ್ತು ಬೂತ್ ಸಮಿತಿಯ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತ ಬಂಧುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here