ಸಾಮಾಜಿಕ ಜಾಲತಾಣದಲ್ಲಿ ಸತ್ಯಜೀತ್ ಸುರತ್ಕಲ್ ರ ತೇಜೋವಧೆ, ಬಿಲ್ಲವ ಸಂಘಟನೆ ಖಂಡನೆ-ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಅಧ್ಯಕ್ಷ, ಬಿಲ್ಲವ ಸಮಾಜದ ಮುಖಂಡ, ಶೋಷಿತರ ಧ್ವನಿ ಸತ್ಯಜಿತ್ ಸುರತ್ಕಲ್ ರವರನ್ನು ಬೆಳ್ತಂಗಡಿಯ ಶಾಸಕರು ಹಾಗೂ ಇವರ ಬೆಂಬಲಿಗರು ತೇಜೋವಧೆ ಮಾಡುತ್ತಿರುವುದು ಖಂಡನೀಯ.ಈ ಬಗ್ಗೆ ತೇಜೋವಧೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗುವುದು ಎಂದು ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ವತಿಯಿಂದ ಮೇ.1 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಎಂ.ಕೆ.ಪ್ರಸಾದ್ ಮಾತನಾಡಿದರು.

5 ವರ್ಷಗಳಿಂದ ಎಲ್ಲಾ ರೀತಿಯಲ್ಲೂ ಬಿಲ್ಲವ ಸಮಾಜವನ್ನು ತುಳಿಯುತ್ತಿರುವ ಶಾಸಕರು ಹಾಗೂ ಅವರ ಹಿಂಬಾಲಕರು ಅದರ ಮುಂದುವರಿದ ಭಾಗವಾಗಿ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಇವರನ್ನು ಫೇಸ್‌ಬುಕ್ ನಕಲಿ ಪೇಜ್ ಮತ್ತು ಖಾತೆಗಳಲ್ಲಿ ಕೀಳು ಮಟ್ಟದ ಶಬ್ದಗಳಿಂದ, ಏಕವಚನದಿಂದ ನಿಂದನೆ ಮಾಡುತ್ತಿರುವುದನ್ನು ತಾಲೂಕಿನ ಎಲ್ಲಾ ಬಿಲ್ಲವ ಸಂಘಗಳು ಒದಗಿನಿಂದ ಖಂಡಿಸುತ್ತೇವೆ.ಪ್ರಕಾಶ್ ಕೋಟ್ಯಾನ್ ಎನ್ನುವ ನಕಲಿ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಸತ್ಯಜಿತ್ ಇವರನ್ನು ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ.ಇದನ್ನು ಬಿಲ್ಲವ ಸಮಾಜ ಎಂದಿಗೂ ಸಹಿಸುವುದಿಲ್ಲ.
ಸದ್ರಿ ನಕಲಿ ಖಾತೆಯಲ್ಲಿ ಕವರ್ ಫೋಟೋದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಇವರ ಭಾವಚಿತ್ರ ಇರುವುದು.ಈ ನಕಲಿ ಫೇಸ್‌ಬುಕ್ ಖಾತೆಯಿಂದ ಹಲವು ಭಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡುವ ಮೂಲಕ ಬಿಲ್ಲವ ಸಮಾಜ ಹಾಗೂ ಧಮನಿತ ಸಮಾಜದ ನಡುವೆ ಗೊಂದಲಗಳನ್ನು ಮೂಡಿಸುತ್ತಿರುವುದು ಕಂಡುಬಂದಿರುತ್ತದೆ.ನಾವು ಯಾವುದೇ ಪಕ್ಷದ ಪರವಾಗಿ ಅಥವಾ ರಾಜಕೀಯ ವ್ಯಕ್ತಿಯ ಪರವಾಗಿ ಮಾತನಾಡುತ್ತಿಲ್ಲ.ನಮ್ಮ ಸಮಾಜದ ಧ್ವನಿ ಸತ್ಯಜಿತ್ ಸುರತ್ಕಲ್ ರವರನ್ನು ತೇಜೋವಧೆ ಮಾಡುತ್ತಿರುವ ಬಗ್ಗೆ ಮಾತ್ರ ಪತ್ರಿಕಾ ಹೇಳಿಕೆಯನ್ನು ನೀಡುತ್ತಿದ್ದೇವೆ.ಸತ್ಯಜೀತ್ ಯಾವುದೇ ಪಕ್ಷದ ಪರವಾಗಿ ಅಥವಾ ವ್ಯಕ್ತಿಯ ಪರವಾಗಿ ಮತಯಾಚನೆ ಮಾಡಿರುವುದಿಲ್ಲ. ಬದಲಾಗಿ ನಾರಾಯಣಗುರು ಏಚಾರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಬಿಲ್ಲವ ಸಮಾಜದ ಕೋರಿಕೆಯ ಮೇರೆಗೆ ಮಾತ್ರ ಮತಯಾಚನೆ ಮಾಡಿರುವುದು ಸ್ಪಷ್ಟ.ಇತರ ಕ್ಷೇತ್ರದಲ್ಲಿ ಸಮಾಜದ ವ್ಯಕ್ತಿಗಳ ಕೋರಿಕೆ ಇದ್ದಲ್ಲಿ ಅವರ ಪರವಾಗಿ ಮತಯಾಚಿಸಲು ಬದ್ಧರಾಗಿದ್ದಾರೆ.ಸತ್ಯಜಿತ್ ಸುರತ್ಕಲ್ ಇವರಿಗೆ ಈಗ ಯಾವುದೇ ಪಕ್ಷದಲ್ಲಿಯಾಗಲಿ ಹಿಂದೂ ಸಂಘಟನೆಯಲ್ಲಾಗಲಿ ಜವಾಬ್ದಾರಿಯಿಲ್ಲ.ಕಳೆದ ಮೂರು ವರ್ಷಗಳಿ೦ದ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷರಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇದ್ದಾರೆ.ಸುಜಿತ್ ಸುರತ್ಕಲ್ ಸ್ವತಂತ್ರರು.ಬಿಲ್ಲವ ಸಮಾಜದ ಅಭ್ಯರ್ಥಿಯ ಪರವಾಗಿ ಬಿಲ್ಲವ ಸಂಘಟನೆಗಳ ಜೊತೆಗೂಡಿ ಪ್ರಮುಖರ ಮನೆಗೆ ಭೇಟಿ ನೀಡಿ ಬಿಲ್ಲವ ಸಮಾಜವನ್ನು ಗೆಲ್ಲಿಸಿಕೊಡುವ ಬಗ್ಗೆ ಮಾತುಕತೆಯನ್ನು ಮಾಡಿರುತ್ತಾರೆ. ಅದನ್ನು ಬಿಟ್ಟು ಪಕ್ಷದ ಬಗ್ಗೆ ಮಾತಾಡಿರುವುದಿಲ್ಲ, ಪಕ್ಷದಲ್ಲಿ ಗುರುತಿಸಿಕೊಂಡವರ ಜೊತೆ ಪ್ರಚಾರಕ್ಕೆ ಹೋಗಿರುವುದಿಲ್ಲ.ಸಮಾಜದ ಜೊತೆ ಸಮಾಜದ ಪ್ರಮುಖರ ಮನೆ ಮನೆಯ ಭೇಟಿಯನ್ನು ಮಾಡಿರುತ್ತದೆ.

ಪಕ್ಷಾತೀತವಾಗಿ ಕರ್ತವ್ಯವನ್ನು ಈ ಚುನಾವಣೆಯಲ್ಲಿ ಮಾಡುತ್ತಾ ಇದ್ದಾರೆ ಹೊರತು ಯಾವುದೇ ರಾಜಕೀಯ ಪಕ್ಷದ ಪರವಾಗಿ ಹೋಗುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಅರಣ್ಯಾಧಿಕಾರಿಯಾಗಿದ್ದ ನಮ್ಮ ಸಮಾಜದ ಸಂಧ್ಯಾ ಇವರನ್ನು ದುರುದ್ದೇಶ ಪೂರ್ವಕವಾಗಿ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರುವುದು, ವೇಣೂರು ಪೆರ್ಮುಡ ಕಂಬಳ ಸಮಿತಿಯು ಗೌರವಾಧ್ಯಕ್ಷ ಮಾಜಿ ಶಾಸಕ ವಸಂತ ಬಂಗೇರ ಹಾಗೂ ನಿತೀಶ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದರೂ ಇನ್ನೊಂದು ಸಸಿಯನ್ನು ರಚನೆ ಮಾಡಿ ಆ ಮೂಲಕ ಕಂಬಳವನ್ನು ಹೈಜಕ್ ಮಾಡುವ ವಿಫಲ ಪ್ರಯತ್ನ ಮಾಡಿರುತ್ತಾರೆ. ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಮಾಡುವ ಸಂದರ್ಭದಲ್ಲಿ ಹಾಗೂ ಪಠ್ಯಪುಸ್ತಕ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ.ಸಮಾಜವನ್ನು ನಿಂದಿಸಿ ಕೋಟಿ-ಚೆನ್ನಯ್ಯ ರ ಬಗ್ಗೆ ಅವಹೇಳನ ಮಾಡಿದ ಜಗದೀಶ್ ಅಧಿಕಾರಿಯವರನ್ನು ಕಾರ್ಯಕ್ರಮದ ಅತಿಥಿಯಾಗಿ ಅಹ್ವಾನಿಸಿ ಗೌರವವನ್ನು ನೀಡಿರುತ್ತಾರೆ.ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನದಿಂದ ತೆಗೆದು ದುರುದ್ದೇಶ ಪೂರ್ವಕವಾಗಿ ಕನ್ನಡ ಪಠ್ಯಕ್ಕೆ ಅಳವಡಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥನನ್ನು ಬಿಲ್ಲವ ಸಮಾಜದ ವಿರೋಧವನ್ನು ಲೆಕ್ಕಿಸದೆ ವೇಣೂರು ಬಹ್ಮಕಲಶಕ್ಕೆ ಆಹ್ವಾನಿಸಿ ಸಮಾಜಕ್ಕೆ ಲೋಹವನ್ನು ಎಸಗಿದ್ದಾರೆ. ಉಪ್ಪಿನಂಗಡಿ ಕೊಣಾಲು ದೈವಸ್ಥಾನದಲ್ಲಿ ಬಿಲ್ಲವರಿಗೆ ಪ್ರವೇಶವನ್ನು ನೀಡದಿದ್ದಾಗ ಶಾಸಕರಾಗಿ ಯಾವುದೇ ಸಹಕಾರ ನೀಡಿರುವುದಿಲ್ಲ.ಪಕ್ಷದ ಹೆಸರಿನಲ್ಲಿ ಬಿಲ್ಲವರನ್ನು ಎತ್ತಿಕಟ್ಟಿ ಪ್ರತ್ಯೇಕ ಸಂಘಟನೆಯನ್ನು ರಚಿಸಿ ಬಿಲ್ಲವರನ್ನೇ ವಿಂಗಡಿಸಿ ಗೊಂದಲದ ವಾತಾವರಣವನ್ನು ನಿರ್ಮಿಸಿರುತ್ತಾರೆ.ಇಂತಹ ಹಲವಾರು ವಿಷಯಗಳಲ್ಲಿ ಬಿಲ್ಲವ ಸಮಾಜವನ್ನು ತುಳಿಯುತ್ತಿರುವ ಶಾಸಕರು ಹಾಗೂ ಇವರ ಹಿಂಬಾಲಕರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.

ಇನ್ನು ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯಾವುದೇ ನಾಯಕರ ಮತ್ತು ಸಂಘ ಸಂಸ್ಥೆಗಳನ್ನು ತೇಜೋವಧೆ ಮಾಡುವುದನ್ನು ಮುಂದುವರಿಸಿದ್ದೇ ಆದಲ್ಲಿ ಈ ಬಗ್ಗೆ ಸೂಕ್ತ ಕಾನೂನು ಕ್ರಮಗಳ ಮೂಲಕ ಉತ್ತರವನ್ನು ನೀಡುತ್ತೇವೆ.ಮತ್ತು ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಯುವಾವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್, ಪ್ರಧಾನ ಕಾರ್ಯದರ್ಶಿ, ಸುನೀಲ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿ ಮಾಧವ ಪೂಜಾರಿ ನೆರಿಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here