ಬಾಹುಬಲಿಗೆ ವಿಶೇಷ ಪಾದ ಪೂಜೆ

0

ಚನ್ನರಾಯಪಟ್ಟಣ (ಹಾಸನ) : ಶ್ರವಣಬೆಳಗೊಳದ ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನರಾದ ಪ್ರಯುಕ್ತ ಅವರ ಆತ್ಮ ಶಾಂತಿಗಾಗಿ ಭಾನುವಾರ ವಿಂಗ್ಯಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ವಿಶೇಷ ಪಾದಪೂಜೆ ನೆರವೇರಿಸಲಾಯಿತು.ನೂತನ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟರಕ ಸ್ವಾಮೀಜಿ ಸಾನಿಧ್ಯದಲ್ಲಿ ಬೆಳಗ್ಗಿನಿಂದಲೇ ದೊಡ್ಡಬೆಟ್ಟದ ಮೇಲೆ ಧಾರ್ಮಿಕ ವಿಧಾನಗಳು ಶಾಸ್ತ್ರೋಕ್ತವಾಗಿ ಜರುಗಿದವು.108 ಕಲಶಗಳನ್ನು ಸ್ಥಾಪಿಸಿ ಅವುಗಳಿಗೆ ಪೂಜೆ ಸಲ್ಲಿಸಿದ ನಂತರ ಬಾಹುಬಲಿ ಪಾದಕ್ಕೆ ಎಲ್ಲಾ ಕಲಶಗಳಿಂದ ಜಲಾಭಿಷೇಕ ನೆರವೇರಿಸಲಾಯಿತು.

ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯ ಗಿರಿಯಲ್ಲಿ ಭಾನುವಾರ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆತ್ಮ ಶಾಂತಿಗಾಗಿ ವಿಶೇಷ ಪಾದ ಪೂಜೆ ನೆರವೇರಿತು.

LEAVE A REPLY

Please enter your comment!
Please enter your name here