ನಮ್ಮ ಟಿವಿಯ ಬಲೆ ಚಾತುರ್ಪು ತೋಜಲೆ ಸ್ಪರ್ಧೆಯಲ್ಲಿ ‘ಬೆಳ್ತಂಗಡಿ ಯುವ ವಾಹಿನಿ ಘಟಕಕ್ಕೆ ಪ್ರಥಮ ಸ್ಥಾನ’

0

ಬೆಳ್ತಂಗಡಿ : ಮಂಗಳೂರಿನ ಪುರಭವನದಲ್ಲಿ ನಮ್ಮ ಟಿವಿ ಯವರು ಆಯೋಜಿಸಿದ್ದ ಬಲೆ ಚಾತುರ್ಪು ತೋಜಲೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕವು ಪ್ರಥಮ ಬಹುಮಾನ ಗಳಿಸಿದೆ.
ಉಡುಪಿ ಹಾಗೂ ದ.ಕ ಜಿಲ್ಲೆಯ 20 ಕ್ಕೂ ಅಧಿಕ ತಂಡಗಳು ಭಾಗ ವಹಿಸಿದ್ದು ಇದರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ತುಳುನಾಡಿನ‌ ಜೀವನದಿಯಾದ ನೇತ್ರಾವತಿಯ ತಿರುವ ಯೋಜನೆಯ ಪರಿಕಲ್ಪನೆಯನ್ನು ಒಳಗೊಂಡ ಪ್ರದರ್ಶನವನ್ನು ನೀಡಿದ ತಂಡಕ್ಕೆ ತೀರ್ಪುಗಾರರ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.


ಯುವವಾಹಿನಿ ಘಟಕ ರಿ.ಬೆಳ್ತಂಗಡಿ ಯ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಎಲ್ಲಾ ಸದಸ್ಯರು ಸಹಕಾರ ನೀಡಿದರು.

ಇನ್ನೂ ಈ ವೈವಿಧ್ಯಮಯ ಕಾರ್ಯಕ್ರಮದ ರಚನೆ ಪರಿಕಲ್ಪನೆ: ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ನಿರ್ದೇಶನವನ್ನು ಕನಸು ಮಾರಟಕ್ಕಿದೆ ಸಿನಿಮಾದ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ,ಮಾಡಿದ್ದು ಯುವ ಸಾಹಿತಿ ಚಂದ್ರಹಾಸ ಬಳೆಂಜ, ಅಶ್ವಥ್ ಕುಮಾರ್ , ಅನನ್ಯ, ಯಶವಂತ ನಿನಾಸಂ,ಸುಧಾಮಣಿ, ಹಾಗೂ
60ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here