ಪಟ್ರಮೆ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ: ಆರೋಪಿ ವಿರುದ್ದ ಪ್ರಕರಣ ದಾಖಲು

0

ಪಟ್ರಮೆ: ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟದ ಉದ್ಧೇಶದ ಮೇರೆಗೆ ತಯಾರಿಸುತ್ತಿದ್ದ ಬಗ್ಗೆ ಖಚಿತ ಪಡಿಸಲು ಪೊಲೀಸರು ದಾಳಿ ನಡೆಸಿದಾಗ ಪಟ್ರಮೆಯ ವಾಮನ ಗೌಡ ಎಂಬಾವರ ಮನೆಯ ಹಿಂಬಾಗದಲ್ಲಿ 5 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಪರಿಕರಣಗಳನ್ನು ಪತ್ತೆಹಚ್ಚಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಪರಾರಿಯಾದ ವಾಮನ ಗೌಡ ಆರೋಪಿ ವಿರುದ್ದ ಮೊಕದ್ದಮೆಯನ್ನು ಅಬಕಾರಿ ನಿರೀಕ್ಷಕರು ದಾಖಲಿಸಿದ್ದಾರೆ. ಕಳ್ಳಭಟ್ಟಿ ಸಾರಾಯಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ಒಟ್ಟು ಸುಮಾರು ರೂ.5,200/- ಎಂದು ಸ್ಪಷ್ಟನೆ ನೀಡಿದ್ದಾರೆ.

ನಿರೀಕ್ಷಕ ನವೀನ್ ಕುಮಾರ್, ಉಪ ನಿರೀಕ್ಷಕ ಸಯ್ಯದ್ ಶಬೀರ್ ಹಾಗೂ ಅಬಕಾರಿ ಕಾನ್ಸ್ ಟೇಬಲ್ ಭೋಜ ಕೆ, ವಿನೋಯ್ ಸಿ.ಜಿ ಮತ್ತು ವಾಹನ ಚಾಲಕ ನವೀನ್ ಕುಮಾರ್ ಅಬಕಾರಿ ಕುಮಾರ್ ಪಿ ಭಾಗಿಯಾಗಿದ್ದಾರೆ. ಪ್ರಕರಣವನ್ನು ನವೀನ್ ಕುಮಾರ್ ಅಬಕಾರಿ ನಿರೀಕ್ಷಕರು, ಬೆಳ್ತಂಗಡಿ ವಲಯರವರು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here