ವಿಧಾನಸಭೆ ಚುನಾವಣೆ 2023- ಕಲ್ಮಂಜದಲ್ಲಿ ಬಿಜೆಪಿ ಪೂರ್ವಸಿದ್ಧತೆ ಮತ್ತು ಸಮಾಲೋಚನಾ ಬೈಠಕ್

0

ಕಲ್ಮಂಜ:ವಿಧಾನಸಭೆ ಚುನಾವಣೆಗೆ ಬೆಳ್ತಂಗಡಿಯಲ್ಲೂ ಭರದ ತಯಾರಿ ನಡೆಯುತ್ತಿದೆ. ಬಿಜೆಪಿಯಿಂದ ಚುನಾವಣೆಯ ಪೂರ್ವಸಿದ್ಧತೆ ಮತ್ತು ಸಮಾಲೋಚನೆ ಬೈಠಕ್ ಕಲ್ಮಂಜದಲ್ಲಿ ನಡೆಸಲಾಯಿತು.
ಬೂತ್ 88ರ ಸಮಿತಿಯ ಅಧ್ಯಕ್ಷರು, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀಧರ್ ಎಂ ಕಲ್ಮಂಜರವರ ಅಧ್ಯಕ್ಷತೆಯಲ್ಲಿ ನಡೆದ ಬೈಠಕ್ ನಲ್ಲಿ ಬಿಜೆಪಿಯ ಬೆಳ್ತಂಗಡಿ ಮಂಡಳ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀನಿವಾಸ್ ರಾವ್ ಧರ್ಮಸ್ಥಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿ, ಚುನಾವಣೆಗೆ ಹೇಗೆ ತಯಾರಿ ಮಾಡಬೇಕೆಂದು ವಿವರಿಸಿದರು.
ಹಿರಿಯ ಕಾರ್ಯಕರ್ತರಾದ ಕೆಂಪಯ್ಯ ಮಡಿವಾಳ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಂ ಕಲ್ಮಂಜ, ಪಂಚಾಯತ್ ಸದಸ್ಯೆ ಪೂರ್ಣಿಮಾ ಮತ್ತು ಬೂತ್ ನ ಪ್ರಮುಖ ಕಾರ್ಯಕರ್ತರು ಬೈಠಕ್ ನಲ್ಲಿ ಭಾಗಿಯಾಗಿದ್ದರು.ಕುಮಾರನಾಥ್ ಕಲ್ಮಂಜ ನಿರೂಪಣೆ ಮಾಡಿದ್ರೆ, ರಘು ಟಿ ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here