ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಮ್ ಆಯ್ಕೆ

0

ಬೆಳ್ತಂಗಡಿ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರನ್ನು ಕಣಕ್ಕಿಳಿಸಲಾಗಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ 124 ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು ಬೆಳ್ತಂಗಡಿಯಿಂದ ರಕ್ಷಿತ್ ಶಿವರಾಮ್ ಕಣಕ್ಕಿಳಿಯಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ, ಕೆಪಿಸಿಸಿ ಮತ್ತು ಸ್ಕ್ರೀನಿಂಗ್ ಕಮಿಟಿ ಶಿಫಾರಸ್ಸು ಮಾಡಿದ ಬಳಿಕ ಎಐಸಿಸಿ ಪಟ್ಟಿಯನ್ನು ಅಂತಿಮಗೊಳಿಸಿದ್ದು ಬೆಸ್ಟ್ ಫೌಂಡೇಶನ್ ಮುಖ್ಯಸ್ಥರೂ ಆಗಿರುವ ರಕ್ಷಿತ್ ಶಿವರಾಮ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಮಾಜಿ ಪೊಲೀಸ್ ಅಧಿಕಾರಿಯಾಗಿರುವ ಬಿ.ಕೆ.ಶಿವರಾಮ್ ಅವರ ಪುತ್ರರಾಗಿರುವ ರಕ್ಷಿತ್ ಅವರು ಬೆಳ್ತಂಗಡಿ ಹೇರಾಜೆ ಮನೆತನದವರಾಗಿರುವ ನಿವೃತ್ತ ಎಸ್ಪಿಗಳಾದ ಪಿತಾಂಬರ ಹೇರಾಜೆ ಮತ್ತು ಮಿತ್ರ ಹೇರಾಜೆಯವರ ಕಿರಿಯ ಸಹೋದರಿ ಲತಾರವರ ಪುತ್ರ.

LEAVE A REPLY

Please enter your comment!
Please enter your name here