ಬಜಿರೆ : ಮೂಲಭೂತ ಸೌಕರ್ಯ ಒದಗಿಸಲು ರೈತ ಸಂಘ ಒತ್ತಾಯ

0

ವೇಣೂರು : ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕ – ರಾಜ್ಯ ಸಂಚಾಲಕ ಮತ್ತು ಜಿಲ್ಲಾಧ್ಯಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ವಿಧಾನ ಸಭಾ ಅಭ್ಯರ್ಥಿ ಆದಿತ್ಯ ಎನ್.ಕೊಲ್ಲಾಜೆ ಮತ್ತು ಅವರ ತಂಡ ಬಜಿರೆ, ಗ್ರಾಮಕ್ಕೆ ಸಹಿ ಅಭಿಯಾನ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ಮಾ.22 ರಂದು ಭೇಟಿ ನೀಡಿದರು.
ಈ ಸಂದರ್ಭ ಗ್ರಾಮಸ್ಥರು, ಕಳೆದ 5 ವರ್ಷಗಳಿಂದ ಹಲವೆಡೆ ನೀರಿಲ್ಲದೆ, ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಜನ ಪ್ರತಿನಿಧಿಗಳು ಉದ್ದೇಶ ಪೂರ್ವಕವಾಗಿ ಸಹಾಯ ಮಾಡುತ್ತಿಲ್ಲ. ಮನೆಗಳ ದುರಸ್ಥಿಗೆ ಗ್ರಾಮಸ್ಥರು ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದರೆ ಎಂದು ಆರೋಪಿಸಿದರು.
ಈ ಬೇಜವಾಬ್ದಾರಿಯನ್ನು ರೈತ ಯುವ ಮುಖಂಡರು ಖಂಡಿಸಿದ್ದು, ಮುಂಬರುವ ವಾರದಲ್ಲಿ ಸಹಿ ಅಭಿಯಾನದಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ತಿಳಿಸಿದರು.
ಭೇಟಿ ತಂಡದಲ್ಲಿ ಯುವ ಮುಖಂಡ ಸುರೇಂದ್ರ ಕೋರ್ಯ, ಅವಿನಾಶ್, ದೇವಪ್ಪ, ಉಮೇಶ್ ಪೂಜಾರಿ, ರಿತೇಶ್, ಸಮಿತ್ ಮತ್ತು ವಿಠಲ ನೂಜಿ ಹಾಜರಿದ್ದರು.

LEAVE A REPLY

Please enter your comment!
Please enter your name here