ಮಾ.30: ಸೇವಾಭಾರತಿ ವತಿಯಿಂದ ಕೊಕ್ಕಡ ಸೇವಾಧಾಮದಲ್ಲಿ ವಿವಿಧ ಸೇವಾಕಾರ್ಯ ಹಸ್ತಾಂತರ, ವಾರ್ಷಿಕ ಸಂಭ್ರಮ

0

ಪತ್ರಿಕಾ ಗೋಷ್ಠಿ

ಧರ್ಮಸ್ಥಳ: ಸೇವಾ ಭಾರತಿ ಬೆಳ್ತಂಗಡಿ ತಾಲೂಕು 2004 ರಲ್ಲಿ ಕನ್ಯಾಡಿಯಲ್ಲಿ ಕಾರ್ಯಕ್ಷೇತ್ರವನ್ನಾಗಿಸಿ, ಮೊಳಕೆಯೊಡೆದ ಸೇವಾಭಾರತಿ ಸಂಸ್ಥೆ ಬೆಳ್ತಂಗಡಿ ತಾಲೂಕನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಬೆಳೆದು ನಿಂತಿತು. ಕಳೆದ ನಾಲ್ಕು ವರ್ಷಗಳಿಂದ ಸೇವಾಧಾಮದ ಮೂಲಕ ಆರು ಜಿಲ್ಲೆಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ನಮ್ಮ ಸೇವಾಭಾರತಿ 18 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 19 ನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸುಸಂದರ್ಭದಲ್ಲಿ ವಿವಿಧ ಸೇವಾಕಾರ್ಯಗಳ ಹಸ್ತಾಂತರ ಹಾಗೂ ವಾರ್ಷಿಕ ಸಂಭ್ರಮ ಕಾರ್ಯಕ್ರಮವನ್ನು ಮಾ. 30 ರಂದು ಕೊಕ್ಕಡ ಸೌತಡ್ಕ ಸೇವಾಧಾಮ ಪುನಶ್ವೇತನ ಕೇಂದ್ರ ಹಮ್ಮಿಕೊಂಡಿದೆ ಎಂದು ಸೇವಾ ಭಾರತಿ ಸಂಸ್ಥೆಯ ಸ್ಥಾಪಕ ಸಂಚಾಲಕ ವಿನಯಕ ರಾವ್ ಹಾಗೂ ಅಧ್ಯಕ್ಷೆ ಸ್ವರ್ಣಗೌರಿ ಹೇಳಿದರು.

ಅವರು ಮಾ.23 ರಂದು ಕನ್ಯಾಡಿ ಸೇವಾ ನಿಕೇತನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್‌ನ ಸಿ ಇ ಓ ರಾಜೇಶ್ ಫಡಿಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಭಟ್‌ ಹಾಗೂ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದಾರೆ.
ಪುನಶ್ವೇತನಾ ಕೇಂದ್ರ ಹಾಗೂ ಸಮುದಾಯದಲ್ಲಿ ಮಾ.25 ರಂದು ಅಮಜಾನ್ ಎಂಪ್ಲೋಯ ಗ್ರಾಂಟ್ ನಡಿ ಅರ್ಹ ಫಲಾನುಭವಿಗಳಿಗೆ 5 ಗಾಲಿಕುರ್ಚಿ,10 ಕಮೊಡೊ ಗಾಲಿಕುರ್ಚಿ, 25 ಬೆಡ್ ಶೀಟ್,1 ಪ್ರೋಜೆಕ್ಟರ್ ತಲಾ 50 ಬಿಪಿ ಮತ್ತು ಗ್ಲುಕೋ ಮೀಟರ್, 25 ಸೆಲ್ಫ್ ಕೇರ್ ಕಿಟ್, 1 ಯುಪಿಯಸ್ ಯುನಿಟ್, 20 ವಾಟರ್ ಬೆಡ್ ಹಾಗೂ ಲಾಪ್ ಟಾಪ್‌ ಸಹಾಯ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾಪ್ಕೋ ವತಿಯಿಂದ 20 ಗಾಲಿಕುರ್ಚಿ, 1 ಕಮೊಡೋ ಗಾಲಿಕುರ್ಚಿ 52 ಸೆಲ್ಫ್ ಕೇರ್ ಕಿಟ್, 15 ಮೆಡಿಕಲ್ ಕಿಟ್ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

ಬೆಂಗಳೂರಿನ ಕಮ್ ಟ್ರೆಂಡ್ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಸತತವಾಗಿ 3 ವರ್ಷಗಳಿಂದ ಸಂಸ್ಥೆಗೆ ಬೆಂಬಲಿಸುತ್ತಾ ಬರುತ್ತಿದ್ದು ಸಂಸ್ಥೆಯನ್ನು ಉನ್ನತೀಕರಿಸಲು ಸಹಾಯವನ್ನು ಮಾಡಿದೆ. ಇವರಿಂದ ಸಿ ಎಸ್ ಆರ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 1 ಸ್ಟೇರ್ ಕೇಸ್ ವಿಥ್ ರ್ಯಾಂಪ್, 1ತ್ರೆಡ್ ಮಿಲ್,10 ಹಾಸಿಗೆ ಮತ್ತು ಮಂಚ, 1 ಪೋಜೆಕ್ಟರ್, 10 ವಾಟರ್ ಬೆಡ್, ಗಾಲಿಕುರ್ಚಿ, 1 ಯುಪಿಯಸ್ ಯುನಿಟ್ ಹಾಗೂ ಬ್ರೆಡ್ ಮಿಲ್ ವಿಥ್ ಬೋಡಿ ವೈಟ್ ಅನ್ನು ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದಿಂದ ಶಿವಮೊಗ್ಗ ಮತ್ತು ಹಾಸನ 2 ಜಿಲ್ಲೆ ಯನ್ನು ಸೇವಾ ಭಾರತಿ ಯೋಜನೆಗೆ ಸೇರ್ಪಡೆ ಮಾಡಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಸೇವಾಭಾರತಿಯ ಕಾರ್ಯದರ್ಶಿ ಬಾಲಕೃಷ್ಣ, ಮೆನೇಜರ್ ಚರಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here