ಮದ್ದಡ್ಕ : ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

0

ಕುವೆಟ್ಟು: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ ಮಾ. 22 ರಂದು ಅಸ್ರಣ್ಣ ರಘರಾಮ ಭಟ್ ಮಠ ಮನೆ ಮತ್ತು ಶ್ರೀನಿವಾಸ ಅಮ್ಮುಣ್ಣಾಯ ಮೂಡು ಮನೆ ಅವರ ಉಪಸ್ಥಿತಿಯಲ್ಲಿ ಜರಗಿತು.

ಸಂಜೆ ಮಠ ಮನೆಯಿಂದ ದೈವದ ಭಂಡಾರದ ಮೆರವಣಿಗೆಯು ಭಜರಂಗದಳ ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಘಟಕದ ನೇತ್ರತ್ವದಲ್ಲಿ ವಿಶೇಷ ಸುಡು ಮದ್ದು ಪ್ರದರ್ಶನದೊಂದಿಗೆ ಬಂದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ತದ ನಂತರ ದೈವದ ನೇಮೋತ್ಸವ ಜರಗಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಮೋಹನ ಕೆರ್ಮುಣ್ಣಾಯ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗ್ರಾಮಸ್ಥರು, ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಸಾಂಸ್ಕ್ರತಿಕ ಕಾರ್ಯಕ್ರಮ ವಿಷ್ಣು ಕಲಾವಿದರು ಮದ್ದಡ್ಕ ಅಭಿನಯದ ಅನಂತ್ ಎಸ್ ಇರ್ವತ್ರಾಯ ತಂಗೋಯಿ ಸಾರಥ್ಯದ ಸಂತೋಷ್ ಕುಲಾಲ್ ಹೊಸ್ಮಾರು ರಚನೆಯ ‘ಆಯೆ ಏರಾದಿಪ್ಪು’ ನಾಟಕ ಮದ್ದಡ್ಕ ಬಂಡೀಮಠ ಮೈದಾನದ ವೆಲ್ಕಂ ಯೂತ್ ಕ್ಲಬ್ ರಂಗಮಂದಿರದಲ್ಲಿ ಜರಗಿತು.

LEAVE A REPLY

Please enter your comment!
Please enter your name here