ಬೆಳ್ತಂಗಡಿ : ಮುಗ್ಗ ಗುತ್ತು ಕಾರ್ಯಕಾರಿಣಿ ಸಭೆ

0

ಬೆಳ್ತಂಗಡಿ :ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಬಿಲ್ಲವ ಮನೆತನದ ಮುಗ್ಗ ಗುತ್ತಿನ ವಿಶೇಷ ಕಾರ್ಯಕಾರಿಣಿ ಸಭೆ ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದಲ್ಲಿ ಟ್ರಸ್ಟಿನ ಮುಕ್ತೇಸರ ಮಾಜಿ ಶಾಸಕ ಕೆ.ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ಮಾ.22 ರಂದು ನಡೆಯಿತು.

ಮುಗ್ಗ ಗುತ್ತಿನ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಿರಿಯ ಸದಸ್ಯ ಪೀತಾಂಬರ ಹೇರಾಜೆ , ಕೋಶಾಧಿಕಾರಿ ಶೇಖರ ಬಂಗೇರ, ಜಗನ್ನಾಥ ಬಂಗೇರ, ಡಾ. ರಾಜಾರಾಮ್ ಕೆ.ಬಿ., ಚರಣ್ ಕೆ. ತುಕಾರಾಂ, ಶ್ರೀಮತಿ ಜಾನಕಿ ಕೇಶವ್, ನವೀನ್ ಬಂಗೇರ ಬಂಗಾಡಿ,ದಿನೇಶ್, ಪ್ರಶಾಂತ ಪೂಜಾರಿ. ಶ್ರೀಮತಿ ಹೇಮಾ ನಿಸರ್ಗ, ಪದ್ಮನಾಭ ಪೂಜಾರಿ ಮುಂತಾದವರು ಹಾಜರಿದ್ದರು.
ಉಪಾಧ್ಯಕ್ಷ ಭಗೀರಥ ಜಿ ಸ್ವಾಗತಿಸಿ ಪ್ರಸ್ತಾವಿಸಿದರು. ಡಾ. ರಾಜಾರಾಮ್ ರವರು ವಂದಿಸಿದರು.

LEAVE A REPLY

Please enter your comment!
Please enter your name here