ಜೆಸಿಐ ಪುತ್ತೂರಿನಲ್ಲಿ ಜೆಸಿಐ ಬೆಳ್ತಂಗಡಿಯ ಸಹಯೋಗ

0

ಬೆಳ್ತಂಗಡಿ: ವ್ಯಕ್ತಿತ್ವ ವಿಕಸನಕ್ಕೆ ಹೆಸರುವಾಸಿಯಾದ ಜೆಸಿಐಯಿಂದ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಪುತ್ತೂರಿನಲ್ಲಿ ನಡೆಯಿತು.

ಜೇಸಿಐ ಪುತ್ತೂರು ಆಥಿತ್ಯದಲ್ಲಿ ಮತ್ತು ಬೆಳ್ತಂಗಡಿ ಮಂಜುಶ್ರೀ ಸಹಭಾಗಿತ್ವದಲ್ಲಿ ನಡೆದ ತರಬೇತಿಯಲ್ಲಿ ಹಲವಾರು ಯುವಕರು ಭಾಗವಹಿಸಿ ಜೇಸಿಯ ರಾಷ್ಟ್ರೀಯ ತರಬೇತುದಾರರಾದ ವೇಣುಗೋಪಾಲ್ ಹಾಗೂ ಜೆಸಿ ಪಶುಪತಿ ಶರ್ಮಾ ಇವರಿಂದ ತರಬೇತಿ ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಜೆಸಿ ಶಂಕರ್ ರಾವ್ ವಹಿಸಿಕೊಂಡಿದ್ದರು.

ವೇದಿಕೆಯಲ್ಲಿ ಜೇಸಿಐ ಪುತ್ತೂರು ಅಧ್ಯಕ್ಷರಾದ ಜೆಸಿ ಸುಹಾಸ್ ಮರಿಕೆ ಮತ್ತು ತರಬೇತಿ ವಿಭಾಗದ ಜೆಸಿ ದೀಕ್ಷಾ ಕೂಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here