ಕಲ್ಲೇರಿಯಲ್ಲಿ ಸನದು ದಾನ ಮಹಾ ಸಮ್ಮೇಳನ

0

ತಣ್ಣೀರುಪಂತ ಇಲ್ಲಿಯ ಮುಬಾರಕ್ ನಗರ ನೂರುಲ್ ಹುದಾ ಜುಮ್ಮಾಮಸೀದಿಯಲ್ಲಿ ಇಕ್ರಾಮುಸುನ್ನ 12 ನೇ ವಾರ್ಷಿಕ ಪ್ರಥಮ ಸನದುದಾನ ಮಹಾ ಸಮ್ಮೇಳನ ಮಾ.15 ಮತ್ತು 16ರಂದು ಜರುಗಿತು. ಇಕ್ರಾಮುಸುನ್ನ ಪ್ರಾಂಶುಪಾಲರಾದ ಸೈಯ್ಯದ್ ಮೊಹ್ಸಿನ್ ತಂಙಳ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಲಸ ರವರು ಮುಖ್ಯ ಪ್ರಭಾಶನ ನಡೆಸಿದರು.ಆಧ್ಯಾತ್ಮಿಕ ಗುರುವರ್ಯರಾದ ನೂರುಸ್ಸಾದಾತ್ ಸೈಯ್ಯದ್ ಬಾಯಾರ್ ತಂಙಳ್ ರವರು ದುಆ ಆಶಿರ್ವಚನ ನಡೆಸಿದರು.


ಜಮಾತ್ ಅಧ್ಯಕ್ಷ ಅಬ್ದುಲ್ ರಝಾಕ್ ರವರು ಧ್ವಜಾರೋಹಣ ನೆರವೇರಿಸಿದರು. ತ್ವಾಹತಂಙಳ್ ರವರಿಂದ ಬುರ್ದಾ ಮಜ್ಲಿಸ್ ಬೆಂಗಳೂರು ನಬೀಲ್ ಬರಕಾತಿಯವರಿಂದ ನ ಅತೇ ಶರೀಫ್, ಖತಮುಲ್ ಖುರ್ ಆನ್.ಸಯ್ಯದ್ ಪಯಮಳ್ಳೂರ್ ತಂಙಳ್ ಮೌಲೀದ್, ಶಿಷ್ಯಸಂಗಮ, ಮುತ ಅಲ್ಲಿಂ ಕಲಾಸಂಘಮ ,12 ಬಿರುದು ದಾರಿ ಉಸ್ತಾದರುಗಳಿಗೆ ಇಕ್ರಾಮುಸುನ್ನ ಸನದುದಾನ. ಕಾರ್ಯಕ್ರಮ ನಡೆಯಿತು.

ಶರೀಫ್ ಮದನಿ ತುರ್ಕಳಿಕೆ, ಅಯೂಬ್ ಸ.ಅದಿ ನಾವುರ, ಸುನೀರ್ ಅಝ್ಹರಿ ಮಲಪ್ಪುರಂ, ಬಶೀರ್ ಮದನಿ ಕಬಕ, ಕಲಂದರ್ ಮದನಿ ಜೋಗಿ ಬೊಟ್ಟು.ಜಂಯಿಯತುಲ್ ಉಲಮಾ, ನೇತಾರರಾದ ಹೈದರ್ ಮದನಿ ಕರಾಯ, ಕಾಸಿಂ ಮದನಿ ಕರಾಯ, ಆದಂ ಅಹ್ಸನಿ ಗುರುವಾಯನಕೆರೆ, ರಮೀಝ್ ಹಾಶಿಮಿ ಕಲ್ಲೇರಿ, ಶಾಜಹಾನ್ ವೈಕಡವು ಹಾಗೂ ಜಮಾಅತ್ ನೇತಾರರು, ಎಸ್ ವೈ ಎಸ್ ನೇತಾರರು, ಮುಸ್ಲಿಂ ಜಮಾಅತ್ ನೇತಾರರು, ಎಸ್ ಎಸ್ ಎಫ್ ಎಸ್.ಬಿ.ಎಸ್. ನೇತಾರರು ಉಲಮಾ ಗಳು, ಉಮರಾ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here