ರೋಟರಿ ಕ್ಲಬ್ ನಿಂದ ಸಾಹಿತಿ ಪ.ರಾ. ಶಾಸ್ತ್ರಿಗಳಿಗೆ ಸನ್ಮಾನ

0

ಬೆಳ್ತಂಗಡಿ :ರೋಟರಿ ಕ್ಲಬ್ ವತಿಯಿಂದ ಮಾ.16 ರಂದು ಕಾಶಿಬೆಟ್ಟಿನ ರೋಟರಿ ಸೇವಾಭವನದಲ್ಲಿ ತಾಲೂಕಿನ ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಗಳು ಹಾಗೂ ಅವರ ಪತ್ನಿ ಶ್ರೀಮತಿ ಶಾರದಾರವರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲೇಖಕರು ತಮ್ಮ ಸುಧೀರ್ಘ ಸಾಹಿತ್ಯದ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಯಾವುದೇ ಒಂದು ಸಾಹಿತ್ಯದ ಪ್ರಾಕಾರಕ್ಕೆ ಅಂಟಿಕೊಳ್ಳದೆ ಮಕ್ಕಳ ಸಾಹಿತ್ಯ, ಕೃಷಿ, ಸಾಮಾಜಿಕ ವಿಷಯಗಳು ಇತ್ಯಾದಿ ಎಲ್ಲಾ ಕ್ಷೇತ್ರಗಳ ಕುರಿತಾಗಿ ಎಲ್ಲಾ ಪ್ರಾಕಾರಗಳ ಸಾಹಿತ್ಯ ರಚನೆ ಮಾಡಿರುವ ಲೇಖಕರು ತಮ್ಮ ಸಾಹಿತ್ಯಿಕ ಬದುಕಿನ ಸಿಹಿ ಕಹಿಗಳ ನೆನಪನ್ನು ತೆರೆದಿಟ್ಟರು.


ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ನಿವೃತ್ತ ಮೇಜರ್ ಜನರಲ್ ರೊ. ಎಂ ವಿ ಭಟ್, ನಿಯೋಜಿತ ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ ಹಾಗೂ ರೋಟರಿ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ರೊ. ರಕ್ಷಾ ರಾಘ್ನೇಶ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here