ಬಳಂಜ:ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ನಿಶಾಂತ್ ಟ್ರೋಫಿ ಸೀಸನ್-2 ಬಿಡ್ಡಿಂಗ್ ಮಾದರಿಯ ಲೀಗ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯು ಅಟ್ಲಾಜೆ ಮೈದಾನದಲ್ಲಿ ಮಾ12 ರಂದು ನಡೆಯಿತು.
ಕ್ರಿಕೆಟ್ ಪಂದ್ಯಾಟದ ಮೂಲ ಉದ್ದೇಶದಂತೆ ಪಂದ್ಯಾವಳಿಯಲ್ಲಿ ಉಳಿಕೆ ಮೊತ್ತ ಸುಮಾರು 30 ಸಾವಿರ ನಗದನ್ನು ಪುರಂದರ ದೇವಾಡಿಗ ಅವರಿಗೆ ಹಸ್ತಾಂತರಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಇವರ ಪತ್ನಿಯ ಚಿಕಿತ್ಸೆಗೆ ಕಿರು ಸಹಾಯ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ತಂಡಗಳ ಮಾಲಕರು, ಗಣ್ಯರು ಉಪಸ್ಥಿತರಿದ್ದರು.
ಆಯೋಜಕ ಲತೇಶ್ ಪೆರಾಜೆಯ, ಪ್ರಣಾಮ್ ಸ್ವಾಗತಿಸಿದರು.ಅಟ್ಲಾಜೆ ಕ್ರಿಕೆಟರ್ಸ್ ಸಹಕರಿಸಿದರು.