ಗ್ರಾ.ಪಂ.ಗಳಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಕಾರ್ಯಕ್ರಮ

0

ವೇಣೂರು: ಸರಕಾರಿ ಜಮೀನು ಸಕ್ರಮ ಗೊಳಿಸುವ ಅಕ್ರಮ-ಸಕ್ರಮ ಅರ್ಜಿಗಳನ್ನು ಶಾಸಕ ಹರೀಶ್ ಪೂಂಜ ಹಾಗೂ ಅಕ್ರಮ ಸಕ್ರಮ ಸಮಿತಿಯ ಸಮ್ಮುಖದಲ್ಲಿ ಮಾ.14 ರಂದು ದ್ವಿತೀಯ ಹಂತದಲ್ಲಿ ವಿಲೇವಾರಿ ಮಾಡಲಾಯಿತು.
ಮರೊಡಿ ಗ್ರಾ.ಪಂ.ನಲ್ಲಿ 29, ಹೊಸಂಗಡಿ ಗ್ರಾ.ಪಂ.ನಲ್ಲಿ 54, ಕುಕ್ಕೇಡಿ ಗ್ರಾ.ಪಂ.ನಲ್ಲಿ 35 ಹಾಗೂ ವೇಣೂರು ಗ್ರಾ.ಪಂ.ನಲ್ಲಿ 24 ಕಡತಗಳ ವಿಲೇವಾರಿ ನಡೆಯಿತು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಜಯಂತ್ ಕೋಟ್ಯಾನ್, ತಹಶೀಲ್ದಾರ್ ಸುರೇಶ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಉಪಾಧ್ಯಕ್ಷೆ ನಾಗರತ್ನ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಉಪಾಧ್ಯಕ್ಷೆ ಪುಷ್ಪಾ ಡಿ., ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ ಸೇರಿದಂತೆ ಗ್ರಾ.ಪಂ. ಸದಸ್ಯರು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here