ಗಂಡಿಬಾಗಿಲಿನಲ್ಲಿ ವಿವಿಧ ರಸ್ತೆಗಳ ನಿರ್ಮಾಣಕ್ಕೆ ಶಿಲಾನ್ಯಾಸ

0

ನೆರಿಯ :ನೆರಿಯ ಪಂಚಾಯತ್ ವ್ಯಾಪ್ತಿಯ ಅತಿ ಹಿಂದುಳಿದ ಪ್ರದೇಶಗಳಿಗೆ ಸರ್ವ ಋತು ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಶಾಸಕ ಹರೀಶ್ ಪೂಂಜ ರವರ ವಿಶೇಷ ಕಾಳಜಿಯಿಂದ ರಸ್ತೆಗಳು ನಿರ್ಮಾಣವಾಗುತ್ತಿದ್ದು ಲಕ್ಷಾಂತರ ರೂಪಾಯಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಗಂಡಿಬಾಗಿಲು-ಶೌರಿಯಾರು ರಸ್ತೆ ಯ ನಿರ್ಮಾಣ ಕಾಮಗಾರಿಯನ್ನು ಗಂಡಿಬಾಗಿಲು ಚರ್ಚ್ ನ ಧರ್ಮಗುರುಗಳು ಕೆ ಎಸ್ ಎಂ ಸಿ ಎ ನಿರ್ದೇಶಕರು ವಂ. ಫಾ. ಶಾಜಿ ಮಾತ್ಯು ದೀಪ ಬೆಳಗಿಸಿ ಚಾಲನೆ ನೀಡಿದರು ಹಾಗೂ ಸುಮಾರು ರೂ. 20 ಲಕ್ಷ ವೆಚ್ಚದಲ್ಲಿ ಕೂಕ್ಕ ಪಟ್ನಾ, ಮಾಧವತ್ -ಗಂಡಿಬಾಗಿಲು ಹಾಗೂ ಕುಂಬ್ಳಿಮೂಟ್ಟಿಲ್ ಗಂಡಿ ಬಾಗೂ ಹಾಗೂ ಕರೀಮನಡ್ಕ ಗಂಡಿಬಾಗಿಲು ಹಾಗೂ ನೆರಿಯಕ್ಕಾಡ್ ರಸ್ತೆ ಗಳ ಸುಮಾರು ಮುನ್ನೂರು ಮೀಟರ್ ಗಳ ರಸ್ತೆ ಅಭಿವೃದ್ಧಿ ಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ, ಸದಸ್ಯರಾದ ಶ್ರೀಮತಿ ವೇದಾವತಿ, ಉಪಾಧ್ಯಕ್ಷರು ಶ್ರೀಮತಿ ಕುಶಲ ಶ್ರೀಮತಿ ಮರಿಯಮ್ಮ ದೇವಗಿರಿ, ಶ್ರೀ ವಿಶ್ವನಾಥ್ ಬಿ ಜೆ ಪಿ ಜೋಬಿನ್ಸ್, ಪ್ರಜ್ವಲ್ ಮಾದವತ್ ,ಶ್ರೀ ಸುಜನ್ ಆಯಾಮ್ ಕುಡಿ, ಶ್ರೀ ಅಜಯ್ ಕಳ್ಳಿಗಾಟ್ಟ್, ಜಿನೋ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here