ಗುರುವಾಯನಕೆರೆಯಲ್ಲಿ ದೈವರಾಜ ಗುಳಿಗ ನೇಮೋತ್ಸವ

0

ಗುರುವಾಯನಕೆರೆ: ಓಂಕಾರ ಯುವಕ ಮಂಡಲ ರತ್ನಗಿರಿ ಕೋಂಟುಪಲ್ಕೆ ಮತ್ತು ಕಿಣಿ ಕುಟುಂಬಸ್ಥರು ಹಾಗೂ ಊರ ಹತ್ತು ಸಮಸ್ತರ ವತಿಯಿಂದ ವರ್ಷಂಪ್ರತಿ ನಡೆಯುವ ದೈವರಾಜ ಗುಳಿಗ ನೇಮೋತ್ಸವವು ಗುರುವಾಯನಕೆರೆ ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಮಾ.4ರಂದು ನಡೆಯಿತು.
ಬೆಳಿಗ್ಗೆ ಕಲಶ ತಂಬಿಲ ಪರ್ವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಸನ್ಯಾಸಿ ಗುಳಿಗ ದೈವದ ನೇಮೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಗಮನ ಸೆಳೆದ ಸ್ವಾಗತ ದ್ವಾರ: ನೇಮೋತ್ಸವ ನಿಮಿತ್ತವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸ್ವಾಗತ ದ್ವಾರ ಅಳವಡಿಸಲಾಗಿದ್ದು ವಿಶೇಷವಾಗಿ ತಯಾರಿಸಲಾಗಿದೆ.ಈ ಸ್ವಾಗತ ದ್ವಾರ ಎಲ್ಲರ ಗಮನ ಸೆಳೆಯುತ್ತಿತ್ತು.

LEAVE A REPLY

Please enter your comment!
Please enter your name here