ಗೇರುಕಟ್ಟೆ: ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಪ್ ನ ಉರೂಸ್ ಕಾರ್ಯಕ್ರಮದ ಸಮಾರೋಪ

0

ಗೇರುಕಟ್ಟೆ: ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಪ್ ನ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ಫೆ. 25 ರಂದು ನಡೆಯಿತು.
ಸಂಜೆ ನಡೆದ ಸಾಮೂಹಿಕ ಝಿಯಾರತ್ ನೇತೃತ್ವವನ್ನು ಜಿಲ್ಲಾ ಸಂಯುಕ್ತ ಜಮಾಅತ್ ನ ಸಹಾಯಕ ಖಾಝಿ ಸೈಯ್ಯದ್ ಸಾದಾತ್ ತಂಞಳ್ ನೆರವೇರಿಸಿದರು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಸೈಯ್ಯದ್ ಅಹಮ್ಮದ್ ಮುಖ್ತಾರ್ ತಂಞಳ್ ಕುಂಬೋಳ್ ದುವಾಶೀರ್ವಚನ ಮಾಡಿದರು. ಅಬೂಬಕ್ಕರ್ ಸಿದ್ದೀಕ್
ಮುಈನಿ ಸ್ವಾಗತಿಸಿದರು. ಜಾರಿಗೆಬೈಲು ಮುದರ್ರಿಸ್ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್- ಫುರ್ಖಾನಿ ಉದ್ಘಾಟಿಸಿದರು. ಸೈಯ್ಯದ್ ಮನ್ ಶರ್ ತಂಞಳ್ ಉಪದೇಶ ನೀಡಿದರು. ಪರಪ್ಪು ಖತೀಬರಾದ ತಾಜುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಫೀ ಲತೀಫೀ ನುಚ್ಚಾಡು ಮುಖ್ಯ ಪ್ರಭಾಷಣಗೈದರು. ಉರೂಸ್ ಸಮಿತಿಯ ಅಧ್ಯಕ್ಷರಾದ ಹಾಜಿ ಬಿ.ಕೆ. ರವೂಫ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸೈಯದ್ ಅಬ್ದುಲ್ಲ ತಂಞಳ್, ಅಬೂಬಕ್ಕರ್ ಹಾಜಿ ಪೆಳತ್ತಲಿಕೆ, ನಝೀರ್ ಬೆಳ್ತಂಗಡಿ, ಉಮರುಲ್ ಫಾರೂಖ್ ಸಖಾಫಿ, ಖಾಲಿದ್ ಸಅದಿ ಬೇಂಗಿಲ,ಜುನೈದ್ ಆಝ್ ಹರಿ, ಹಸೈನಾರ್ ಸಅದಿ, ಇಕ್ಬಾಲ್ ಮರ್ ಝೂಕಿ, ಸಂಶೀರ್ ಸಖಾಫಿ,ಅಬೂಬಕ್ಕರ್ ಮರ್ಝೂಕಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಹಬೀಬ್ ಸಖಾಫಿ,ಮನ್ಸೂರ್ ಝುಹರಿ, ಬಿ.ಎಮ್. ಅಬೂಬಕ್ಕರ್ ಸಿದ್ದೀಕ್ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ಅಝ್ ಹರಿ, ಹೈದರ್ ಮರ್ಧಾಳ, ನಝೀರ್ ಅಹ್ಸನಿ, ಅಝೀಝ್ ಮದನಿ, ಪಿ.ಬಿ. ಖಾದರ್ ಹಾಜಿ, ಉಸ್ಮಾನ್ ಹಾಜಿ.ಎಸ್., ಮಹಮ್ಮದ್ ಹನೀಫ್.ಬಿ.ಐ, ಅಬೂಸ್ವಾಲಿಹ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಲತೀಫ್ ಪರಿಮ ಉಪಸ್ಥಿತರಿದ್ದರು.
ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿಯಾದ ರಕ್ಷಿತ್ ಶಿವರಾಮ್, ಜಿಲ್ಲಾ ವಕಫ್ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕಾಜೂರು,ಬೆಳ್ತಂಗಡಿ ಮುಸ್ಲಿಮ್ ಜಮಾಅತ್ ನ ಪ್ರದಾನ ಕಾರ್ಯದರ್ಶಿಯಾದ ಮಹಮ್ಮದ್ ರಫೀ ಬೆಳ್ತಂಗಡಿ, ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಜಮಾಆತ್ ನ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here