ಶ್ರೀ ಗುರುದೇವ ಸಹಕಾರ ಸಂಘದ 20ನೇ ಶಾಖೆ ಪಡೀಲ್ ನಲ್ಲಿ ಉದ್ಘಾಟನೆ

0

ಬೆಳ್ತಂಗಡಿ :ಶ್ರೀ ಗುರುದೇವ ಸಹಕಾರ ಸಂಘದ 20 ನೇ ಪಡೀಲ್ ಶಾಖೆಯ ಉದ್ಘಾಟನೆ ಫೆ. 28 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ವಹಿಸಿದ್ದರು.
ಕಚೇರಿ ಉದ್ಘಾಟನೆಯನ್ನುಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಚಿತ್ತಾರಂಜನ್, ಭದ್ರತಾ ಕೋಶದ ಉದ್ಘಾಟನೆಯನ್ನು ಮಂಗಳೂರು ಮಾಜಿ ಶಾಸಕ ಜೆ. ಆರ್.ಲೋಬೊ, ಗಣಕಯಂತ್ರದ ಉದ್ಘಾಟನೆಯನ್ನು ಕುದ್ರೋಳಿ ಶ್ರೀ ಗೋಕರ್ನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನೆರೆವೇರಿಸಿ ಶುಭಹಾರೈಸಿದರು. ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ ಯನ್ನು ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಎಸ್ ಆರ್ ಆರ್ ಮಸಲಾ ಇದರ ಮಾಲಕ ಶೈಲೇಂದ್ರ ಸುವರ್ಣ ಇವರು ನೆರವೇರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರ ಜಯಾನಂದ ಅಂಚನ್, ಬಿ ಅಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ರಾಜೇಶ್ ಬಿ., ಶ್ರೀ ಜನಾರ್ದನ ಬಿ ಅಧ್ಯಕ್ಷರು ಕುಡುಪು ವಿ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಬಿ., ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಭರತೇಶ್ ಆಮೀನ್, ಕಂಕನಾಡಿ , ನವನಿಧಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ಸತೀಶ್ ಶೆಟ್ಟಿ ಪಡಿಲ್ ಗೇಟ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಶ್ರೀಮತಿ ರೂಪ ಶ್ರೀ ಪೂಜಾರಿ, ಶ್ರೀಮತಿ ಶೋಭಾ ಪೂಜಾರಿ , ಶ್ರೀಮತಿ ಚಂದ್ರಾವತಿ ವಿಶ್ವನಾಥ್ , ಸಂದೀಪ್ ಗರೋಡಿ, ಬಿ ಅಬ್ದುಲ್ ಹಮೀದ್ ಕರಾವಳಿ ಸರ್ವಿಸ್ ಸ್ಟೇಷನ್ ಪಡಿಲ್, ಹರೀಶ್ ಕೆ ಪೂಜಾರಿ ಬೈಲಬರಿ ಉಪಾಧ್ಯಕ್ಷರು ಯುವ ವಾಹಿನಿ ಕೇಂದ್ರ ಸಮಿತಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಪಿ.ದಿವಾಕರ, ಸಂಜೀವ ಪೂಜಾರಿ, ಶೇಖರ ಬಂಗೇರ, ಜಗದೀಶ್ಚಂದ್ರ ಡಿ.ಕೆ, ಶ್ರೀಮತಿ ಸುಜಿತಾ ವಿ ಬಂಗೇರ, ಚಂದ್ರಶೇಖರ, ಆನಂದ ಪೂಜಾರಿ ಹಾಗೂ ಶಾಖಾ ವ್ಯವಸ್ಥಾಪಕರುಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿ, ವಿಶೇಷ ಅಧಿಕಾರಿ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಗೈದರು. ನಿರ್ದೇಶಕರಾದ ಜಗದೀಶ್ಚಂದ್ರ ಡಿ ಕೆ ವಂದನಾರ್ಪಣೆ ಸಲ್ಲಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here