ಬೆಳ್ತಂಗಡಿ ತಾ| ಮಹಿಳಾ ಸಹಕಾರ ಸಂಘದ ಸಿಇಒ ಆಗಿ ಸ್ವರ್ಣಗೌರಿ ಲಕ್ಷ್ಮೀನಾರಾಯಣ ರಾವ್ ಅಧಿಕಾರ ಸ್ವೀಕಾರ

0

ಬೆಳ್ತಂಗಡಿ : ಇತ್ತೀಚೆಗೆ ನೂತನವಾಗಿ ಪ್ರಾರಂಭಗೊಂಡ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರ ಸಂಘ ಉಜಿರೆ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಮತಿ ಸ್ವರ್ಣಗೌರಿ ಲಕ್ಷ್ಮೀನಾರಾಯಣ ರಾವ್ ರವರು ಅಧಿಕಾರ ವಹಿಸಿಕೊಂಡಿದ್ದಾರೆ.

ಇವರು ರಾಜ್ಯಪ್ರಶಸ್ತಿ ವಿಜೇತ ಸ್ವಯಂ ಸೇವಾ ಸಂಸ್ಥೆ “ಸೇವಾಭಾರತಿ” ಕನ್ಯಾಡಿ ಇದರ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಸಿಗೊಂಡಿದ್ದಾರೆ.

ಅಲ್ಲದೆ ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ದುಡಿದಿದ್ದಾರೆ ಹಾಗೂ ಕನಾಟಕ ರಾಜ್ಯ ಬ್ರಾಹ್ಮಣ ಪರಿಷತ್ತಿನಲ್ಲಿ ಬೆಳ್ತಂಗಡಿ ತಾಲೂಕಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here