ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವರ ನೂತನ ಬಿಂಬ ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವ, ನಾಗದೇವರ ಪ್ರತಿಷ್ಠೆ ಹಾಗೂ ವರ್ಷಾವಧಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನಡ:ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ, ಶ್ರೀ ಸತ್ಯನಾರಾಯಣ ದೇವರ ನೂತನ ಶಿಲಾಬಿಂಬ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಕಟ್ಟೆಯಲ್ಲಿ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ವರ್ಷಾವಧಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಫೆ. 10 ರಂದು ಊರ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಶ್ರೀ ಕ್ಷೇತ್ರದ ಧರ್ಮದರ್ಶಿ ರಾಧಾಕೃಷ್ಣ ಹೊಳ್ಳರ ನೇತೃತ್ವದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವವು ಮಾ.1 ರಿಂದ ಮಾ.10 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವೇಕಾನಂದ ಭೋಜಾರ, ಗಣೇಶ್ ಭಟ್, ವಸಂತ ದೇವಾಡಿಗ, ಲೋಕಯ್ಯ ಗೌಡ, ಉದ್ಯಮಿ ರಮೇಶ್, ವಿಜಯಗೌಡ, ನಾರಾಯಣ ನಾಯ್ಕ, ಗೋಪಾಲ ಪೂಜಾರಿ, ಗೋಪಾಲ ಗೌಡ, ಭಾಸ್ಕರ ಕುಂಬಾರ, ಶ್ರೀಮತಿ ಮಂಜುಳಾ ರತ್ನಾಕರ ದೇವಾಡಿಗ, ಶ್ರೀಮತಿ ವಸಂತಿ ಪೂಜಾರಿ, ನಡ ಗ್ರಾಮಸ್ಥರು, ವಿಲಯದವರು, ಉತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಹೊಳ್ಳ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here