ಫೆ. 17-18: ಕೋರ‍್ಯಾರುಗುತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಪ್ರತಿಷ್ಠಾ ವರ್ಧಂತಿ ಉತ್ಸವ, ದೊಂಪದಬಲಿ

0

ಉಜಿರೆ : ಇಲ್ಲಿಯ ಮಾಚಾರು ಕೋರ‍್ಯಾರುಗುತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ವತಿಯಿಂದ ಫೆ.17 ಮತ್ತು 18 ರಂದು ಶ್ರೀ ವ್ಯಾಘ್ರಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ದೊಂಪದ ಬಲಿ ಜರಗಲಿರುವುದು.
ಫೆ.17 ರಂದು ಪ್ರತಿಷ್ಠಾ ವರ್ಧಂತಿಯಂದು ಬೆಳಿಗ್ಗೆ ಕೋರ‍್ಯಾರು ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ನಾಗ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ತಂಬಿಲ ಸೇವೆ, ಮಹಾ ಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮಾಚಾರು ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯಿಂದ ಭಜನೆ, ಭಂಡಾರ ಇಳಿಯುವುದು ಬಳಿಕ ವ್ಯಾಘ್ರ ಚಾಮುಂಡೇಶ್ವರಿ ನೇಮೋತ್ಸವ, ಅನ್ನಸಂತರ್ಪಣೆ. ಫೆ.18 ರಂದು ಬೆಳಿಗ್ಗೆ ದುರ್ಗಾ ಪೂಜೆ, ಕಲಶಾಭಿಷೇಕ, ಮಹಾ ಪೂಜೆ ಅನ್ನಸಂತರ್ಪಣೆ, ಸಂಜೆ ಶ್ರೀ ಲಕ್ಷ್ಮಿ ನಾರಾಯಣ ಭಜನಾ ಮಂಡಳಿ ಮಕ್ಕಳ ಭಜನೆ. ಭಂಡಾರ ಇಳಿಯುವುದು ದೊಂಪದ ಬಲಿ ಉತ್ಸವ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಜಿ. ಗೋಪಾಲಕೃಷ್ಣ ಉಪಾಧ್ಯಾಯ, ಆಡಳಿತ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಮತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here