ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ರಿಕ್ಷಾ: ಮಹಿಳೆ ಸಾವು

0

ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಫೆ.3 ರಂದು ಮುಂಡಾಜೆ ಸಮೀಪ ನಡೆದಿದೆ.

ಕಾಜೂರಿನಲ್ಲಿ ನಡೆಯುತಿದ್ದ ಉರೂಸ್ ಕಾರ್ಯಕ್ರಮಕ್ಕೆ ಕುಕ್ಕಾವು ಸಮೀಪದ ಅಟೋ ರಿಕ್ಷಾದಲ್ಲಿ ಚಿಬಿದ್ರೆಗೆ ತೆರಳುತಿದ್ದಾಗ ಮುಂಡಾಜೆ ಬಳಿಯ ಕಾಪು ಚೆಡಾವು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಮೃತ್ಯುಂಜಯ ನದಿಗೆ ಉರುಳಿಬಿದಿದ್ದು ಅದರಲ್ಲಿದ್ದ ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ (57ವ) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿರುವ ಬಗ್ಗೆ ತಿಳಿದುಬಂದಿದೆ.

ಉಳಿದ ಪ್ರಯಾಣಿಕರಾದ ಸಫಿಯಾ ರವರ ಅಳಿಯ ಭದ್ರಾವತಿಯ ನಿವಾಸಿ ಆಶ್ರಫ್, ಇಬ್ಬರು ಮಕ್ಕಳು, ಹಾಗೂ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತಕ್ಷಣ ಸ್ಥಳೀಯರು ಶಾಸಕ ಹರೀಶ್ ಪೂಂಜರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೂಂಜರು, ಸಾಂತ್ವನ ನೀಡಿ ಪೂರ್ಣ ನೆರವು ನೀಡುವುದಾಗಿ ತಿಳಿಸಿದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here