ಕುಲಾಲ ಕುಂಬಾರರಿಗೆ ಸ್ಥಾನಮಾನ: ಫೆ. 12ರಂದು ಸಂಘಟನಾತ್ಮಕ ಹೋರಾಟದ ರೂಪು ರೇಷೆಯ ಸಮಾಲೋಚನಾ ಸಭೆ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಮತ್ತು ರಾಷ್ಟ್ರೀಯ ಪ್ರಜಾಪತಿ ಕುಂಬಾರರ ಮಹಾ ಸಂಘಗಳ ನೇತೃತ್ವದಲ್ಲಿ, ರಾಜ್ಯದ ಸಮಾನ ಮನಸ್ಕ ರಾಜ್ಯ ಸಂಘಟನೆಗಳ ಆಯ್ದ ನಾಯಕರುಗಳ ಜೊತೆ ಕರ್ನಾಟಕ ರಾಜ್ಯ ಕುಂಬಾರ ಮಹಾ ಸಂಘ ಬೆಂಗಳೂರು ಸಹಿತ ಸಮುದಾಯಕ್ಕೆ ಅಗತ್ಯವಾಗಿ ಸಿಗಲೇಬೇಕಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸ್ಥಾನಮಾನ ಹಾಗೂ ಸಂಘಟನಾತ್ಮಕ ಹೋರಾಟದ ರೂಪು ರೇಷೆಯ ಸಮಾಲೋಚನಾ ಸಭೆಯನ್ನು ಫೆ. 12ರಂದು ಮಧ್ಯಾಹ್ನ12 ಗಂಟೆಗೆ ಬೆಂಗಳೂರು ರಾಜ್ ಭವನದ ಬಳಿಯ ಕ್ಯಾಪಿಟಲ್ ಹೋಟೆಲ್‌ನಲ್ಲಿ ತುರ್ತಾಗಿ ಕರೆಯಲಾಗಿದೆ.
ರಾಜ್ಯ ಸಮಾಲೋಚನಾ ಸಭೆಗೆ ಸಮಾನ ಮನಸ್ಕ ಎಲ್ಲಾ ರಾಜ್ಯ ವಿಭಾಗ, ಜಿಲ್ಲಾ ಮಟ್ಟದ ಕುಂಬಾರ ಕುಲಾಲ, ಮೂಲ್ಯ ಹಾಂಡ, ಗುನಗ ಸಂಘಟನೆ ಹಿರಿಯರು, ನಾಯಕರುಗಳು, ಯುವಕರು ಮತ್ತು ಮಹಿಳಾ ನಾಯಕರುಗಳು ಭಾಗವಹಿಸುವಂತೆ ಕರ್ನಾಟಕ ರಾಜ್ಯ ಕುಲಾಲ್ ಕುಂಬಾರರ ಯುವವೇದಿಕೆ ಅಧ್ಯಕ್ಷ ಗಂಗಾಧರ್ ಬಂಜನ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ ರಾಜ್ಯ, ವಿಭಾಗ ಹಾಗೂ ಜಿಲ್ಲಾ ಮಟ್ಟದ ಸರ್ವ ಪದಾಧಿಕಾರಿಗಳು ಭಾಗವಹಿಸುವಂತೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here