ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ದಾವಣಗೆರೆಯ ಹರಿಹರಕ್ಕೆ ವರ್ಗಾವಣೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೃಥ್ವಿ ಸಾನಿಕಂ ವರ್ಗಾವಣೆಗೊಂಡಿದ್ದಾರೆ.ಕಂದಾಯ ಇಲಾಖೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿರುವ ಆದೇಶದಲ್ಲಿ ಪೃಥ್ವಿ ಸಾನಿಕಂರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಪೃಥ್ವಿ ಸಾನಿಕಂ ಮಹೇಶ್ ಜೆರವರಿಂದ ತೆರವಾದ ಸ್ಥಾನಕ್ಕೆ ಬೆಳ್ತಂಗಡಿಗೆ ಆಗಮಿಸಿದ್ದರು.ಈಗ ಪೃಥ್ವಿಯವರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಪೃಥ್ವಿಯವರ ಜಾಗಕ್ಕೆ ಬೆಳ್ತಂಗಡಿಗೆ ಹೊಸ ಅಧಿಕಾರಿಯ ಹೆಸರು ಇನ್ನೂ ಉಲ್ಲೇಖಿಸಲಾಗಿಲ್ಲ.

LEAVE A REPLY

Please enter your comment!
Please enter your name here