ಸ್ಕಂದ ವಿಘ್ನೇಶ ಹಿಮ್ಮೇಳ ಕಲಾವಿದನಾಗಿ ರಂಗಪ್ರವೇಶ

0

ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಮೋಹನ ಬೈಪಡಿತ್ತಾಯರ ಶಿಷ್ಯ ಸ್ಕಂದ ವಿಘ್ನೇಶ ನ ಹಿಮ್ಮೇಳ ರಂಗಪ್ರವೇಶ ಕಾರ್ಯಕ್ರಮ ಫೆ.1 ರಂದು ಜರುಗಿತು.
ಕಾರ್ಯಕ್ರಮದಲ್ಲಿ ಮೋಹನ ಬೈಪಡಿತ್ತಾಯರಿಗೆ ಗುರುವಂದನೆ ಹಾಗೂ ಅವರ ಪದ್ಯಗಳಿಗೆ ಹಿಮ್ಮೇಳದ ಮದ್ದಳೆ ಮತ್ತು ಚೆಂಡೆ ನುಡಿಸುವ ಮೂಲಕ ಸ್ಕಂದ ವಿಘ್ನೇಶ ನ ರಂಗಪ್ರವೇಶ ನಡೆಯಿತು. ಕಾರ್ಯಕ್ರಮ ನಿರೂಪಣೆಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಡಾ.ಜಿ.ಪಿ ಹೆಗ್ಡೆ ನಿರೂಪಿಸಿದರು. ಬಳಿಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರ ಯಕ್ಷಗಾನ ತಾಳಮದ್ದಳೆ ಪಾರ್ಥ ಸಾರಥ್ಯ ನೆರವೇರಿತು.

LEAVE A REPLY

Please enter your comment!
Please enter your name here