ಬೆಳ್ತಂಗಡಿ: ಪಂ ನೌಕರರ ಶ್ರೇಯೋಭಿವೃದ್ದಿ ಸಂಘದ ವತಿಯಿಂದ ‘ಬೆಂಗಳೂರು ಚಲೋ’ ಹೋರಾಟದ ಬಗ್ಗೆ ಸಮಾಲೋಚನ ಸಭೆ

0

ಬೆಳ್ತಂಗಡಿ: ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವ್ರದ್ದಿ ಸಂಘದ ವತಿಯಿಂದ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗೆಳನ್ನು ಈಡೇರಿಸಿಕೊಡುವಂತೆ ಒತ್ತಾಯಿಸಿ ಫೆ.6 ರಂದು ಬೆಂಗಳೂರಿನಲ್ಲಿ ನಡೆಯುವ ‘ಬೆಂಗಳೂರು ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಲು ತಾಲೂಕು ಮಟ್ಟದ ಪೂರ್ವ ಸಿದ್ಧತಾ ಸಮಾಲೋಚನ ಸಭೆಯು ಜ.28 ರಂದು ಧರ್ಮಸ್ಥಳ ಗ್ರಾ.ಪಂ. ಸಭಾಂಗಣದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಸತೀಶ್ ನಾರಾವಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಯಾವುದೇ ಸೇವಾ ಸೌಲಭ್ಯವಿಲ್ಲದೆ ಕನಿಷ್ಠ ವೇತನಕ್ಕೆ ದುಡಿಯುವ ಪಂಚಾಯತಿ ನೌಕರರಿಗೆ ಸೇವಾ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ತಾಲೂಕಿನ ಪ್ರತಿಯೊಬ್ಬ ನೌಕರರರೂ ಭಾಗವಹಿಸಬೇಕೆಂದು ಅಧ್ಯಕ್ಷ ಸತೀಶ್ ನಾರಾವಿಯವರು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷರಾಗಿದ್ದ ನಿವೃತ್ತ ಸಿಬ್ಬಂದಿ ಕಾಸಿಂ ಪದ್ಮುಂಜ ರವರು ಮಾತನಾಡಿ ಪಂ. ನೌಕರರ ಬೇಡಿಕೆ ಈಡೇರಬೇಕಿದ್ದರೆ ಪ್ರತಿಭಟನೆ ಅನಿವಾರ್ಯ ಎಂದರು.

ಸುಂದರ ಶಿಶಿಲ ಸ್ವಾಗತಿಸಿದರು. ಕಾರ್ಯದರ್ಶಿ ರುಕೇಶ್ ಕಲ್ಮಂಜವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here