ಕೊಕ್ಕಡ: ಹಾಳೆ ತಟ್ಟೆ ಘಟಕದ ನೂತನ ಕಟ್ಟಡದ ಉದ್ಘಾಟನೆ

0

ಕೊಕ್ಕಡ: ಇಲ್ಲಿಯ ಉಪ್ಪಾರಪಳಿಕೆಯ ಶ್ರೀ ಅರೆಕಾ ಲೀಫ್ ಪ್ಲೇಟ್ಸ್ ಮತ್ತು ಪ್ರಕೃತಿ ಲೀಫ್ ಕಪ್ ಇಂಡಸ್ಟ್ರೀಸ್ ಇದರ ಹಾಳೆ ತಟ್ಟೆ ಘಟಕದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಜ.28 ರಂದು ನಡೆಯಿತು.

ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿ.ಜಿ. ನಾಯಕ್ ಸುಳ್ಯ, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಕೃಷ್ಣ ಯಡಪಡಿತ್ತಾಯ ಮಾಲಕ ಉಮೇಶ್ ಬಡೆಕಾಯಿಲು, ಶ್ರೀಮತಿ ರಮಣಿ ಉಮೇಶ್ ಗೌಡ, ಶ್ರೀಕಾಂತ್ ಬಡೆಕಾಯಿಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿ.ಜಿ ನಾಯಕ್ ಸುಳ್ಯ ರವರನ್ನು ಸನ್ಮಾನಿಸಲಾಯಿತು. ಮಾಲಕ ಉಮೇಶ್ ಗೌಡ ರವರು ಪ್ರಾರಂಭದಲ್ಲಿ ಹಾಳೆ ತಟ್ಟೆ ಪ್ರಾರಂಭಿಸುವಾಗ ಆದ ಅನುಭವದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು

ಶ್ರೀಧರ್ ಕೆಂಗುಡೆಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಾದ್ ಬಡೆಕಾಯಿಲು ವಂದಿಸಿದರು. ನಂತರ ದಿನೇಶ್ ರೈ ಕಡಬ ಮತ್ತು ತಂಡದವರಿಂದ ‘ಯಕ್ಷಹಾಸ್ಯ ವೈಭವ’ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here