ಬೈಕ್ ಸ್ಕಿಡ್ ಆಗಿ ಬಿದ್ದು ಸವಾರನ ಮೇಲೆ ಟ್ಯ್ರಾಕ್ಟರ್ ಹರಿದು, ಕಕ್ಕಿಂಜೆ ಸನಿಹದ ಬೀಟಿಗೆ ಸುಲೈಮಾನ್ ಸಾವು

0

ಬೆಳ್ತಂಗಡಿ: ಮೂಡಿಗೆರೆಯ ಆಲ್ದೂರು ಸಮೀಪ ವಸ್ತಾರೆ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದ ವೇಳೆ ಟ್ರ್ಯಾಕ್ಟರ್ ಅವರ ಮೇಲೆ ಹರಿದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಚಾರ್ಮಾಡಿ ಬೀಟಿಗೆ ನಿವಾಸಿ ಸುಲೈಮಾನ್ (35ವ.) ಎಂಬವರು ದಾರುಣವಾಗಿ ಮೃತಪಟ್ಟ ಘಟನೆ ಜ.24 ರಂದು ಸಂಜೆ ವೇಳೆ ನಡೆದಿದೆ.
ಘಟನೆಯಲ್ಲಿ ಬೈಕ್ ಸಹಸವಾರ ಅಶ್ರಫ್ ಅವರಿಗೆ ಹೆಚ್ಚಿನ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯಲ್ಲಿ ಮೃತಪಟ್ಟಿರುವ ಸುಲೈಮಾನ್ ಅವರು ಬೀಟಿಗೆಯ ಮೂಸಕುಂಞಿ ಮತ್ತು ಬೀಫಾತಿಮಾ ದಂಪತಿಯ ಪುತ್ರರಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ‌. ಚಿಕ್ಕಮಗಳೂರಿನ‌ ಸಹೋದರಿಯ ಮನೆಗೆ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕಕ್ಕಿಂಜೆ ಎಸ್‌ಕೆ‌ಎಸ್ಸೆಸ್ಸೆಫ್ ಸಕ್ರೀಯ ಸದಸ್ಯರಾಗಿರುವ ಸುಲೈಮಾನ್ ಅವರು ತಂದೆ, ತಾಯಿ, ಪತ್ನಿ ತೌಸಿಯತ್ ಹಾಗೂ ಇಬ್ಬರು ಸಹೋದರಿಯರು, ಮೂವರು ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತದೇಹದ ಸಾಗಾಟ ಮತ್ತು ಅಂತ್ಯಸಂಸ್ಕಾರ ಕಾರ್ಯಾಚರಣೆ ಯಲ್ಲಿ ಎಸ್‌ಕೆ‌ಎಸ್ಸೆಸ್ಸೆಫ್ ಅಧ್ಯಕ್ಷ ಝುಬೈರ್ ಬಂಡಸಾಲೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಹಕಾರಿಯಾದರು.

LEAVE A REPLY

Please enter your comment!
Please enter your name here