ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

0

ಕಳೆಂಜ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಜ.22ರಂದು ಪ್ರಾರಂಭಗೊಂಡಿತ್ತು.
ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಕೆ. ಶ್ರೀಧರ ರಾವ್ ವಹಿಸಿದ್ದರು. ಬರೆಂಗಾಯ ಅಗ್ರಿಲೀಫ್ ನ ಅವಿನಾಶ್ ರಾವ್ ದೀಪ ಪ್ರಜ್ವಲನಗೈದರು. ಶ್ರೀ ಕ್ಷೇ ಧ. ಗ್ರಾ. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್. ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಬೈಂದೂರಿನ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಆಗಮಿಸಿದ್ದರು.
ಚಂದ್ರಶೇಖರ್ ನೆಕ್ಕರಾಜೆ ಸ್ವಾಗತಿಸಿದರು. ಕೇಶವ ಮಲ್ಲಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಧನ್ಯವಾದವಿತ್ತರು. ರಾಜಾರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here