ರಾಜ್ಯ ಪುರಸ್ಕಾರ ಪರೀಕ್ಷೆ : ಸತತ ನಾಲ್ಕನೇ ಬಾರಿಗೆ ತೇರ್ಗಡೆ ಹೊಂದಿದ ಉಜಿರೆಯ ವಿದ್ಯಾರ್ಥಿಗಳು

0

ಉಜಿರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ರಾಜ್ಯ ಸಂಸ್ಥೆ ವತಿಯಿಂದ ನಡೆದ 2021-22 ನೇ ಸಾಲಿನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಸತತ ನಾಲ್ಕನೇ ಬಾರಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತೇರ್ಗಡೆ ಹೊಂದಿರುತ್ತಾರೆ.

ಉಜಿರೆಯ ಶ್ರೀ ಧ.ಮಂ ಪದವಿ ಕಾಲೇಜಿನ ಅಂತಿಮ ವಾಣಿಜ್ಯ ವಿಭಾಗದ ರಕ್ಷಿತ್ .ಆರ್ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ಶಿವನ್ ಕೆ.ಸಿ ,ಸಶಾಂಕ್ ಬಿ.ಜೆ. ,ಸುಚಿತ್ ಜಿ.ಸಿ , ಹಾಗೂ ರಕ್ಷಾ ,ಪುಣ್ಯಶ್ರೀ ಸೇರಿದಂತೆ 4 ರೋವರ್ಸ್ ಮತ್ತು 2 ರೇಂಜರ್ಸ್ ವಿದ್ಯಾರ್ಥಿಗಳು ರಾಜ್ಯಪಾಲರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಇವರಿಗೆ ರೇಂಜರ್ ಲೀಡರ್ ಡಾ. ರತ್ನಾವತಿ, ಕೆ. ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ತರಬೇತಿ ನೀಡಿದ್ದರು. ಪ್ರಸ್ತುತ ಗಾನವಿ ರೇಂಜರ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here