ಅಳದಂಗಡಿ: ಕೊಳಕೆ, ಪೂರ್ಣೇಶ್ವರಿ ಮಹಿಷಮರ್ಧಿನಿ ಹಾಗೂ ಶ್ರೀ ವಿನಾಯಕ ಸಂಘಗಳ ವಾರ್ಷಿಕೋತ್ಸವ

0

ಅಳದಂಗಡಿ ವಲಯದ ಬಡಗಕಾರಂದೂರು ಕಾರ್ಯಕ್ಷೇತ್ರದ ಕೊಳಕೆ, ಪೂರ್ಣೇಶ್ವರಿ ಮಹಿಷಮರ್ಧಿನಿ ಹಾಗೂ ಶ್ರೀ ವಿನಾಯಕ ಸಂಘಗಳ ವಾರ್ಷಿಕೋತ್ಸವವು ಭಜನಾ ಕಾರ‍್ಯಕ್ರಮದ ಮೂಲಕ ನಡೆಯಿತು.

ಕಾರ್ಯಕ್ರಮದಲ್ಲಿ ವೇಣೂರು ಉಮೇಶ್ ನಡ್ತಿಕಲ್ ಧಾರ್ಮಿಕ ಪ್ರವಚನ ಮಾಡಿದರು, ಹಾಗೂ ಯೋಜನಾಧಿಕಾರಿ ಯಶವಂತರವರು ಮಾತನಾಡುತ್ತಾ ಸಂಘಗಳ ವಾರ್ಷಿಕೋತ್ಸವ ಮಾಡುವುದರ ಮೂಲಕ ಸುತ್ತಮುತ್ತಲಿನ ಸಂಘದ ಸದಸ್ಯರು ಅನ್ಯೋನ್ಯತೆ, ಒಗ್ಗಟ್ಟಾಗಿ ಸಹಬಾಳ್ವೆ ಸಾಧ್ಯ ಹಾಗೂ ಧಾರ್ಮಿಕ ಚಿಂತನೆಯ ಮೂಲಕ ಸಾತ್ವಿಕ ಜೀವನ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮಂಜುನಾಥ ಆಚಾರ್ಯ, ಹರೀಶ್ ಆಚಾರ್ಯ ಎ,ಬಿ ಒಕ್ಕೂಟ ಅಧ್ಯಕ್ಷರು, ಭಜನಾ ಮಂಡಳಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರುಗಳಾದ ಶಾಂತಿರಾಜ್ ಗುಡಿಗಾರ್, ಸದಾನಂದ ಪೂಜಾರಿ ಸೇವಾಪ್ರತಿನಿಧಿ ಹೇಮಲತಾ ಸಂಘದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here