ಪದ್ಮುಂಜ ಶಾಲೆಯಲ್ಲಿ ಜಲ ಜೀವನ್ ಮಿಷನ್ ಮನೆಗೆ ಗಂಗೆ ಮಾಹಿತಿ ಕಾರ್ಯಗಾರ

0

ಪದ್ಮುಂಜ : ದ ಕ ಜಿಲ್ಲಾ ಪಂಚಾಯತ್ ಮಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮಂಗಳೂರು ಇದರ ವತಿಯಿಂದ ಪದ್ಮುಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲ ಜೀವನ್ ಮಿಷನ್ ಮನೆಗೆ ಗಂಗೆ ಮಾಹಿತಿ ಕಾರ್ಯಗಾರ ಜ13 ರಂದು ಸಮಿತಿ ಅಧ್ಯಕ್ಷ ಯುವರಾಜ ಇಂದ್ರ ರವರ ಅಧ್ಯಕ್ಷತೆಯಲ್ಲಿ ಜರಗಿತು.


ಜಿಲ್ಲಾ ಸಮನ್ವಯ ಅಧಿಕಾರಿ ಶಿವರಾಂ ರವರು ಮಾಹಿತಿ ಕಾರ್ಯಗಾರ ನಡೆಸಿ ಕುಡಿಯುವ ನೀರಿನ ಸದುಪಯೋಗ ನೀರಿನ ಬಳಕೆ ಹಾಗೂ ನೀರಿನ ಸಂರಕ್ಷಣೆ ನಡೆಸುವ ಬಗ್ಗೆ ವಿವರಿಸಿದರು. ಪಂ ಅಧ್ಯಕ್ಷೆ ಗಾಯತ್ರಿ .ಪಂ ಕಾರ್ಯದರ್ಶಿ ರಮೇಶ್ ಕೆ., ಎಸ್ ಡಿ ಎಂ ಸದಸ್ಯರಾದ ಕಾಸಿಂ ಪದ್ಮುಂಜ, ಪುರುಶೋತ್ತಮ, ಸೌಮ್ಯ, ಅಬ್ದುರಝಾಖ್, ಶಾಲಾ ನಾಯಕ ಮಿಷಬ್ ಹಾಗೂ ಅಧ್ಯಾಪಕ ವ್ರಂದದವರು ಉಪಸ್ಥಿತರಿದ್ದರು. ಆದರ್ಶ ಗ್ರಾಮ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕಿ ಕೀರ್ತಿ ಯವರು ವಿಜೇತರ ಪಟ್ಟಿ ಓದಿ ಹೇಳಿದರು. ಮುಖ್ಯೋಪಾಧ್ಯಾಯರಾದ ಗಿರಿಜ ಸ್ವಾಗತಿಸಿದರು. ಅಧ್ಯಾಪಕ ಕೇಶವ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕಿ ಪದ್ಮಾವತಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here