ಅರಳಿ ಮಿತ್ರ‌ ಯುವಕ – ಯುವತಿ ಮಂಡಲದಿಂದ ಪ್ರತಿಭಾ ಸಂಗಮ ಹಾಗೂ ಸನ್ಮಾನ  ಕಾರ್ಯಕ್ರಮ 

0

ಉಜಿರೆ:  ಉಜಿರೆಯ  ಕಾಶಿಬೆಟ್ಟು ಅರಳಿ ಎಂಬಲ್ಲಿ‌ ಕಾರ್ಯಾಚರಿಸುತ್ತಿರುವ ಮಿತ್ರ ಯುವಕ ಮಂಡಲ(ರಿ) ಮತ್ತು ಮಿತ್ರ ಮಹಿಳಾ ಮಂಡಳಿ ಅರಳಿ‌ ಉಜಿರೆ ಇದರ ವತಿಯಿಂದ 26ನೇ ವರ್ಷದ ಪ್ರತಿಭಾ ಸಂಗಮ 2023 ಎಂಬ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ  ಮನೋರಮಾ ಭಟ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ದಿನೇಶ್ ಅಲ್ಯೋಟ್ಟು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಾಳಾಗಿ ಶಿವಪ್ರಸಾದ್ ಸಾಮರಸ್ಯ ಮತ್ತು ಪ್ರಭಾಕರ್ ಕೆ ಕಾಶಿಬೆಟ್ಟು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮಟ್ಟದ “ವಿಜಯ ರತ್ನ” ಪ್ರಶಸ್ತಿಯೊಂದಿಗೆ ಪುರಸ್ಕೃತರಾದ ಬಗ್ಗೆ  ಮತ್ತು ಅವರ  ನೇತೃತ್ವದ  “ಬದುಕು ಕಟ್ಟೋಣ ಬನ್ನಿ” ತಂಡಕ್ಕೆ  ಸಮಾಜ ಸೇವೆಯ ಹಿನ್ನೆಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದ ಬಗ್ಗೆ  ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಿಕ ಕೆ ಮೋಹನ್ ಕುಮಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಮಿತ್ರ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರತಿಮಾ ದಿನೇಶ್ ಗೌಡ ಉಪಸ್ಥಿತರಿದ್ದರು.
ವಿನಯ್ ಸಾಲಿಯಾನ್ ಸ್ವಾಗತಿಸಿದರು. ಕ್ರೀಡಾಕೂಟದ ಬಹುಮಾನ ವಿತರಣೆ ನಡೆಯಿತು. ನಿಶಿತ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಭವ್ಯಾ ಅಲ್ಯೋಟ್ಟು  ಧನ್ಯವಾದವಿತ್ತರು.
ಬಳಿಕ ಪ್ರತಿಭಾ ಸಂಗಮದ ಅಂಗವಾಗಿ ಮಕ್ಕಳ ಗಾಯನ,  ಜಾನಪದ ನೃತ್ಯ, ನಾಟಕ, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

LEAVE A REPLY

Please enter your comment!
Please enter your name here