ಮಡಂತ್ಯಾರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನ ಪ್ರಾಣರಕ್ಷಿಸಲು ಶ್ರಮಿಸಿ ಪ್ರಶಂಸೆಗೆ ಪಾತ್ರರಾದ ಪುನೀತ್ ಮಡಂತ್ಯಾರು

0

ಪುನೀತ್ ಕುಮಾರ್ ಮಡಂತ್ಯಾರು

ಮಡಂತ್ಯಾರು: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಪ್ರಜ್ಞಾಹೀನನಾಗಿದ್ದ ಯುವಕನ ಪ್ರಾಣ ಉಳಿಸಲು ಆಪತ್ಬಾಂಧವನಾದ ಪುನೀತ್ ಕುಮಾರ್ ಮಡಂತ್ಯಾರು ಅವರ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಜ. 8ರಂದು ಮಧ್ಯಾಹ್ನ ಮಡಂತ್ಯಾರು ರಾಷ್ಟೀಯ ಹೆದ್ದಾರಿಯಲ್ಲಿ ಸರಕಾರಿ ಬಸ್ಸು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಪ್ರಜ್ಞಾಹೀನನಾಗಿದ್ದ ಮಡವು ಕೊಡ್ಲಕ್ಕೆ ನಿವಾಸಿ ಯಾಧವರವರಿಗೆ ಸ್ಥಳದಲ್ಲಿದ್ದ ಪುನೀತ್ ಕುಮಾರ್ ತಕ್ಷಣ ಪ್ರಥಮ ಚಿಕಿತ್ಸೆ ಸಿಪಿಆರ್ ನ್ನು ನೀಡಿ ಪ್ರಾಣ ಉಳಿಸಿದ್ದಾರೆ.

ನಂತರ ಅಂಬುಲೆನ್ಸ್ ಮುಖಾಂತರ ಎಜೆ ಆಸ್ಪತ್ರೆಗೆ ದಾಖಲಿಸಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ

ಇದೀಗ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಯುವಕನಿಗೆ ಸೊಂಟ ಭಾಗಕ್ಕೆ , ಕೈಗಳಿಗೆ, ತಲೆಗೆ, ಗಂಭೀರ ಗಾಯವಾಗಿದ್ದು ಶಸ್ತ್ರಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಆಗಲಿದೆ. ತಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದು ಆಸ್ಪತ್ರೆಯ ವೆಚ್ಚ ಭರಿಸಲು ಅಶಕ್ತರಾಗಿದ್ದು ಈಗಾಗಲೇ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಮಡವು ತಂಡ, ಯುವಕನ ಸ್ನೇಹಿತರು ಸಹಾಯ ಮಾಡುತಿದ್ದು ದಾನಿಗಳಿಂದ ಸಹಾಯ ಹಸ್ತ ಚಾಚುತಿದ್ದಾರೆ.

LEAVE A REPLY

Please enter your comment!
Please enter your name here