ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ವಿದ್ವಾನ್ ಕೆ.ಅನಂತಪದ್ಮನಾಭ ಉಪಾಧ್ಯಾಯ ಭೇಟಿ

0

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದ
ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಲು ಅಳದಂಗಡಿ ದೇವಸ್ಥಾನಕ್ಕೆ ತಂತ್ರಿವರೇಣ್ಯರಾದ ಆಗಮ ಪ್ರವೀಣ ಪೊಳಲಿ ಕೋಡಿಮಜಲು ವೇದಬ್ರಹ್ಮಶ್ರೀ ವಿದ್ವಾನ್ ಕೆ.ಅನಂತಪದ್ಮನಾಭ ಉಪಾಧ್ಯಾಯರು ಆಗಮಿಸಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಶಶಿಧರ ಡೋಂಗ್ರೆ, ನಿತ್ಯಾನಂದ ಶೆಟ್ಟಿ, ಅನಿಲ್ ಕುಮಾರ್ ಮಾಳಿಗೆ ಮನೆ, ಸುರೇಶ್ ಶೆಟ್ಟಿ ಕುರೆಲ್ಯ, ವಿಶ್ವನಾಥ ಹೊಳ್ಳ, ಜಗನ್ನಾಥ ಶೆಟ್ಟಿ, ನಿರಂಜನ ಜೋಶಿ, ಪ್ರಧಾನ ಅರ್ಚಕರಾದ ಸೋಮನಾಥ ಮಯ್ಯ, ಪ್ರವೀಣ್ ಮಯ್ಯ, ದೀಪಕ್ ಅಠವಳೆ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲಬೈಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕ ವಿಜಯ ಕುಮಾರ್ ಜೈನ್ ನಾವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here