ವೇಣೂರು ದೇಗುಲದ ಬ್ರಹ್ಮಕಲಶೋತ್ಸವ, ಗುತ್ತು ಬರ್ಕೆಯವರ ಸಭೆ

0

ವೇಣೂರು: ಇತಿಹಾಸ ಪ್ರಸಿದ್ದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಗುತ್ತು ಬರ್ಕೆಯವರ ಪೂರ್ವಭಾವಿ ಸಭೆಯು ವೇಣೂರುನಲ್ಲಿ ನಡೆಯಿತು.

ಸಭೆಯಲ್ಲಿ ಅಳದಂಗಡಿ ಅಜಿಲ ಸೀಮೆಯ ಗುತ್ತು ಬರ್ಜೆಯವರು, ಪಟ್ಡಿ ಪ್ರಧಾನರು, ಧಾರ್ಮಿಕ ಮುಖಂಡರು, ಭಜನಾ ಮಂಡಳಿಯ ಪ್ರಮುಖರು, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜರವರು ಬ್ರಹ್ಮಕಲಶೋತ್ಸವದ ಯಶಸ್ವಿಗೆ ಎಲ್ಲರ ಸಹಕಾರ ಕೋರಿದರು.

ವೇದಿಕೆಯಲ್ಲಿ ವೇಣೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಯೋಜನಾಧಿಕಾರಿ ಯಶವಂತ್ ಎಸ್,ವೇಣೂರು ಸಿ.ಎ ಬ್ಯಾಂಕ್ ಅದ್ಯಕ್ಷ ಸುಂದರ ಹೆಗ್ಡೆ ಬಿ.ಇ, ನಿವೃತ ಶಿಕ್ಷಕ ಪ್ರಭಾಕರ ಹಟ್ಟಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here