ಕಣಿಯೂರು: ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

0

ಕಣಿಯೂರು : ಕರ್ನಾಟಕ ಸರಕಾರದ ಸಮಾಜಕಲ್ಯಾಣ ಇಲಾಖೆಯ ಎಸ್ ಸಿಪಿ ಯೋಜನೆಯಡಿ ಕಣಿಯೂರು ಗ್ರಾಮದ ಆಡೆಂಜ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜರವರು ರೂ. 50ಲಕ್ಷ ಅನುದಾನ ಬಿಡುಗಡೆಗೊಳಿಸಿ ಜ.11 ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಣಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ಪದ್ಮಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಕಣಿಯೂರು ಗ್ರಾ.ಪಂ. ಉಪಾಧ್ಯಕ್ಷೆ ಜಲಜಾಕ್ಷಿ, ಕಣಿಯೂರು ಗ್ರಾ.ಪಂ. ಸದಸ್ಯರಾದ ಯಶೋಧರ ಶೆಟ್ಟಿ , ಸೇಸಪ್ಪ ಮೂಲ್ಯ, ಮೋಹಿನಿ, ಶಾರದಾ ರೈ, ರಾಜೀವ್ ರೈ, ನಾರಾಯಣ ಗೌಡ ಮುಚುರು, ಯತೀಶ್ ಶೆಟ್ಟಿ , ಜಿತೇಶ್ ಜೈನ್ ಅಡೆಂಜ, ಅಮಿತ ಕುಶಾಲಪ್ಪ ಗೌಡ, ಅನಿತಾ ಕೇಶವ್ ಸಾಲಿಯಾನ್ ಹಾಗೂ ಬಿಜೆಪಿ ಶಕ್ತಿಕೇಂದ್ರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here